ರಂಗ ಮಾಲಿಕೆ -೧೯ ರಂಗ ಜಂಗಮ 'ಡಾ.ಶಿವಕುಮಾರ ತಾತ'
ಬಣ್ಣದ ಬದುಕು ರಂಗ ಮಾಲಿಕೆ - ೧೯ ರಂಗ ಜಂಗಮ ' ಡಾ.ಶಿವಕುಮಾರ ತಾತ' ರಂಗಭೂಮಿ ಮತ್ತು ರಣಭೂಮಿ ಇವೆರಡೂ ಒಂದಕ್ಕೊಂದು ಪರ್ಯಾಯವಾಗಿ ಬಳಸಲ್ಪಡುವ ಪದಗಳಾಗಿವೆ.ಯಾವುದೇ ಭೂಮಿಗೆ ಕಾಲಿಡುವ ಮುನ್ನ ಯೋಧ ಎನ್ನಿಸ ಬೇಕಾದ್ರೆ ಅವರು ಸಕಲ ವಿದ್ಯೆ ಸಂಪನ್ನರಾಗಿದ್ದರೆ ಮಾತ್ರ ಉಳಿಗಾಲ.ಇಲ್ಲವಾದರೆ ಅವರಿಗದುವೆ ಕೊನೆಗಾಲ.ಈ ನಿಟ್ಟಿನಲ್ಲಿ ರಂಗಭೂಮಿಯ ಬಹುತೇಕ ಕಲಾವಿದರು ಬಹುಮುಖ ಪ್ರತಿಭಾಶಾಲಿಯಾಗಲು ಪ್ರಯತ್ನಿಸುವುದರಲ್ಲಿ ತಪ್ಪೇನಿಲ್ಲ.ಆದರೆ ಯಶಸ್ವಿಯಾಗುವ ಅಭಿನೇತೃಗಳು ಮಾತ್ರ ವಿರಳ.ಬಳ್ಳಾರಿ ರಂಗಭೂಮಿಗೆ ಅನ್ವಯಿಸಿದಂತೆ ಅಂತಹ ವಿರಳಾತಿ ವಿರಳರೆಂದರೆ ಅದು ಸಿರುಗುಪ್ಪ ತಾಲ್ಲೂಕಿನ ಕುಡುದರಹಾಳ್ ಗ್ರಾಮದ ಡಾ.ಶಿವಕುಮಾರ ತಾತಾ. ಇವರು 1948ರ ಜೂನ್ 01 ರಂದು ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಕಟಗೇರಿ ಗ್ರಾಮದ ಕೃಷಿಕ ಬಡಕುಟುಂಬದ ಭದ್ರಣ್ಣ ಮತ್ತು ಪಾರ್ವತಿ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಇವರು ತಾಯಿ ಗರ್ಭದಲ್ಲಿ 8 ತಿಂಗಳ ಶಿಶುವಿರುವಾಗಲೇ ತಂದೆಯನ್ನು ಕಳೆದುಕೊಂಡರು. ಅಲ್ಲಿಂದ ಅನೇಕ ಸಂಕಷ್ಟಗಳ ನಡುವೆ ಭೂಮಿಗೆ ಬಂದು ಮುಂದೆ ರಂಗ ಜಂಗಮನೆನೆಸಿದರು. ಮೂಲತಃ ಬಯಲಾಟದ ಸಾರಥಿಯಾಗಿ ಜನರನ್ನು ನಗಿಸುವ ಹವ್ಯಾಸಿ ಕಲಾವಿದರಾಗಿದ್ದ ಭದ್ರಣ್ಣನವರಿಂದ ಬಳುವಳಿಯಾಗಿ ಶಿವಕುಮಾರಿಗೆ ಬಣ್ಣದ ನಂಟು ಅಂಟಿಕೊಂಡು ಬಂದಿದೆ.ಇವರು ಪ್ರಾಥಮಿಕ ಶಿಕ್ಷಣ ಪಡೆಯುವ ಕಾಲಕ್ಕೆ ನಾಟಕ ಮತ್ತು ಸಂಗೀತದ ಅಭಿರುಚಿ ಇವರನ್ನು ಅವರಿಸಿತು.ಅಂತೆಯೇ ತಮ್ಮ ಎಳೆಯ ...