Posts

Showing posts from March, 2021

ರಂಗ ಮಾಲಿಕೆ-_೧೫ 'ರಂಗ ಸಾರಥಿ ' ದಾರದ ಮಿಲ್ ಕೆ.ಪಂಪಾಪತಿ

Image
 ಬಣ್ಣದ ಬದುಕು ರಂಗ ಮಾಲಿಕೆ -೧೫ 'ರಂಗ ಸಾರಥಿ' ದಾರದ ಮಿಲ್ ಕೆ.ಪಂಪಾಪತಿ. ಬಯಲಾಟ ಎಂದ ಕೂಡಲೇ ನೆನಪಾಗುವುದು ಬಳ್ಳಾರಿ ಜಿಲ್ಲೆ. ಮೂಲತಃ ಬಯಲಾಟ ಹುಟ್ಟಿದ್ದೆ ಬಳ್ಳಾರಿಯಲ್ಲಿ ಎಂದು ಸೋಮಸಮುದ್ರದ ಈಶ್ವರ ದೇವಸ್ಥಾನದಲ್ಲಿ ಕಾಣಸಿಗುವ ಶಾಸನದಲ್ಲಿ ಉಲ್ಲೇಖವಾಗಿದೆ.ಅದಲ್ಲದೇ ಇಂದಿನ ಯಕ್ಷಗಾನದ ಮೂಲವೇ ಬಯಲಾಟ. ಇಂತಹ ಬಯಲಾಟದಲ್ಲಿ ಪ್ರಮುಖವಾಗಿ ನೋಡಬಹುದಾದ ಪಾತ್ರವೇ ಸಾರಥಿ.ಈ ಪಾತ್ರದಿಂದಲೇ ನಾಟಕದಲ್ಲಿ ನವರಸಾದಿಗಳು ಪ್ರೇಕ್ಷಕರೆಡೆಗೆ ಹರಿಯುವವು. ಇಂತಹ ಪಾತ್ರವನ್ನು ಅಮೋಘವಾಗಿ ಸುಮಾರು 2300 ಹೆಚ್ಚು ಪ್ರಯೋಗಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿರುವ ಬಳ್ಳಾರಿಯ ಏಕೈಕ ರಂಗಕಲಾವಿದ ಕೆ.ಪಂಪಾಪತಿ. ಇವರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ (ವಿಜಯನಗರ ಜಿಲ್ಲೆ) ದೇವಲಾಪುರ ಗ್ರಾಮದಲ್ಲಿ ಕೆ ಗಾದೆಪ್ಪ ಮತ್ತು ಗಂಗಮ್ಮ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಬಾಲ್ಯದಲ್ಲಿ ಅಣ್ಣನ ಲಸ್ಕರ್ ವೃತ್ತಿಯಿಂದ ಬರುತ್ತಿದ್ದ ಸಂಬಳದಲ್ಲಿ ಸಂಸಾರವನ್ನು ನಿಭಾಯಿಸಲಾಗದೆ ನಾಲ್ಕನೇ ತರಗತಿಗೆ ವಿದ್ಯಾಭ್ಯಾಸಕ್ಕೆ ವಿಧಾನವನ್ನು ಹೇಳಿ, ಊರಿನ ಹೆಂಗಸರೊಂದಿಗೆ ಕೂಲಿ ಕೆಲಸಕ್ಕೆ ಹೋದರು. ಇವರು ಚಿಕ್ಕವಯಸ್ಸಿನಲ್ಲಿ ಊರಿನ ಸುತ್ತಮುತ್ತ ನಡೆಯುತ್ತಿದ್ದ ಬಯಲಾಟಗಳನ್ನು ನೋಡಲು ಮನೆಯಲ್ಲಿ ಎಲ್ಲರೂ ಮಲಗಿದ ನಂತರ ಕದ್ದು ಮುಚ್ಚಿ ಹೋಗುತ್ತಿದ್ದರು. ಈ ಮೂಲಕ ರಂಗ ಪರಿಸರವಿಲ್ಲದೆ ಮನೆಯಲ್ಲಿ ರಂಗ ಚಿಗುರು ಬೆಳೆಯಲಾರಂಭಿಸಿತು. ತಮ್ಮನ್ನು ತಾವೇ ಗುರುವನ್ನಾಗಿಸಿಕೊಂಡು ತಮ್ಮ ...

ರಂಗ ಮಾಲಿಕೆ -_೧೪ ರಂಗ ಜೀವಾಳ ಬಳ್ಳಾರಿಯ ಹಣ್ಣು ಕಾಯಿ ಶಿವರುದ್ರಯ್ಯಸ್ವಾಮಿ

Image
  ಬಣ್ಣದ ಬದುಕು.. ರಂಗ ಮಾಲಿಕೆ - 14 "ರಂಗ ಜೀವಾಳ " ಬಳ್ಳಾರಿಯ   ಶಿವರುದ್ರಯ್ಯಸ್ವಾಮಿ ಬಹುತೇಕವಾಗಿ ಯಾವುದೇ ರಂಗವಾಗಲಿ ಅಲ್ಲಿ ಬಹುಮುಖ್ಯವಾಗಿ ಮುಖ್ಯ ವಾಹಿನಿಗೆ ಕಾಣಸಿಗುವುದೇ ನಟವರ್ಗ ಮಾತ್ರ.ಆದರೆ ಅಭಿನೇತೃಗಳ ಅಭಿನಯಕ್ಕೆ ಮೆರಗು ನೀಡುವ ಅನೇಕ ತಂತ್ರಜ್ಞರು ಬೆಳಕಿಗೆ ಬಾರದೇ ಮರೆಯಾಗುವರು.ಆ ನಿಟ್ಟಿನಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ಪ್ರದರ್ಶನ ಗೊಳ್ಳುತ್ತಿದ್ದ ಅದೆಷ್ಟೋ ಬಯಲಾಟಗಳಿಗೆ ಆಹಾರ್ಯಾದಿ ಪರಿಕರಗಳನ್ನು ಒದಗಿಸುತ್ತಿದ್ದ ಮತ್ತು ಪ್ರಸ್ತುತ ರಂಗಭೂಮಿಯೊಡನೆ ಸೆಣಸಾಡುತ್ತ ಎಲೆ ಮರೆ ಕಾಯಿಯಂತಿರುವ " ಬಳ್ಳಾರಿಯ ಹಣ್ಣು ಕಾಯಿ ಶಿವರುದ್ರಯ್ಯ" ನವರು ಒಬ್ಬರು. ಇವರು ಬಳ್ಳಾರಿಯ ಎತ್ತಿನಬೂದಿಹಾಳ್ ಗ್ರಾಮದ ರುದ್ರಯ್ಯ ಮತ್ತು ಗೌರಮ್ಮ ಎಂಬುವವರ ಮಗನಾಗಿ ಕ್ರಿ.ಶ.1933 ರಲ್ಲಿ ಜನಿಸಿದರು. ಇವರ ತಾತ ವೀರಭದ್ರಯ್ಯ ಮತ್ತು ತಂದೆಯಿಂದಲೇ ಈ ರಂಗಕಾರ್ಯಕ್ಕೆ ಮುಂದಡಿಯಿಟ್ಟರು.ನಗರದ ಮಧ್ಯದಲ್ಲಿ ಇರುವ ಸಾಲೇಶ್ವರ ಗುಡಿಯ ಹತ್ತಿರವಿದ್ದ ಇವರ ಮನೆಗೆ ಬಂಡಿಗಳನ್ನು ಕಟ್ಟಿಕೊಂಡು ಬಂದು ಬಯಲಾಟ ಪರಿಕರಗಳನ್ನು ಕೊಂಡೊಯ್ಯುತ್ತಿದ್ದ ದೃಶ್ಯಗಳೇ ಇವರ ರಂಗಕೃತಿಗೆ ಸ್ಫೂರ್ತಿಯಾಗಿವೆ.  ಹೀರದ ಸೂಗಮ್ಮ ಮತ್ತು ಶೆಟ್ರ ಗುರುಶಾಂತಪ್ಪ ಶಾಲೆಗಳಲ್ಲಿ ತಮ್ಮ ಪ್ರಾಥಮಿಕ ,ಮಾಧ್ಯಮಿಕ ಶಿಕ್ಷಣ ಅಧ್ಯಯನ ಮಾಡುತ್ತಲೇ ತಂದೆಯಿಂದಲೇ ನಾಟಕದ ಪರಿಕರಗಳನ್ನು ಮಾಡುವ ಕಲೆಯನ್ನು ಕರಗತ ಮಾಡಿಕೊಂಡರು.ಇದರ ಜೊತೆ ಜೊತೆಯಲ್ಲಿ ಸರಳ,ಸುಂದರ,ಅಲ್ಪ ಕಾಲ ಮತ್...