ರಂಗ ಮಾಲಿಕೆ -೫೯ ಬಹುಮುಖ ಪ್ರತಿಭೆಯ ರಂಗ ಸರದಾರ 'ಡಾ.ಅಣ್ಣಾಜಿ ಕೃಷ್ಣಾರೆಡ್ಡಿ'.
ಬಣ್ಣದ ಬದುಕು ರಂಗ ಮಾಲಿಕೆ -೫೯ ಬಹುಮುಖ ಪ್ರತಿಭೆಯ ರಂಗ ಸರದಾರ 'ಡಾ.ಅಣ್ಣಾಜಿ ಕೃಷ್ಣಾರೆಡ್ಡಿ'. ಬಳ್ಳಾರಿ ಕೇವಲ ಕಬ್ಬಿಣದ ಅದಿರಿನ ಗಣಿಯಲ್ಲ, ಬದಲಾಗಿ ಅದು ಕಲಾವಿದರ ಗಣಿಯೂ ಹೌದು. ಅಂತೆಯೇ ಇಲ್ಲಿ ಕಲಾವಿದರ ಗುರು-ಶಿಷ್ಯ ಪರಂಪರೆಯಿದೆ. ಅದಕ್ಕೆ ಒಂದು ಉದಾಹರಣೆಯೆಂದರೆ ಅಪ್ಪ-ಅಮ್ಮನ ಹಾರೈಕೆಯಲ್ಲಿ ಬೆಳೆದು ಗುರುಗಳ ನೆರವಿನಿಂದ ಕಲಾಪ್ರಪಂಚದಲ್ಲಿ ಬಹುಬೇಗನೆ ಗುರುವನ್ನು ಮೀರಿಸುವ ಮಟ್ಟಿಗೆ ಬೆಳೆದುನಿಂತ ಶಿಷ್ಯರಲ್ಲಿ ಒಬ್ಬರೆಂದರೆ ಅದು ಅಣ್ಣಾಜಿ ಕೃಷ್ಣಾರೆಡ್ಡಿ. ಇವರು ತಮ್ಮ ಗುರುಗಳ ಮಾರ್ಗದಲ್ಲೇ ರಂಗ ಮಾರ್ಗವನ್ನು ಹಿಡಿದು ತಮ್ಮ ಶಿಷ್ಯರಿಗೂ ಅದೇ ಮಾರ್ಗವನ್ನು ತೋರಿಸಿ ಗುರುವಿನಂತೆ ಶಿಷ್ಯ ಎಂಬ ಮಾತನ್ನು ನಿಜವಾಗಿ ಸಿದರು. ರಂಗಭೂಮಿಯನ್ನು ಮೆಚ್ಚಿಕೊಂಡು ಬರುವ ಶಿಷ್ಯರು ಭವಿಷ್ಯತ್ತಿನಲ್ಲಿ ಯಾವುದೇ ತೊಂದರೆ ಅನುಭವಿಸದೆ ಇರಲಿ ಎಂಬ ಅಗಾಧ ಚಿಂತನೆಯೊಂದಿಗೆ ರಂಗಭೂಮಿಯಲ್ಲಿ ಹೊಸ ಇತಿಹಾಸವನ್ನು ಬರೆಯಲು ಹೊರಟವರು. ಇಂಥ ಮಹಾನ್ ಕಲಾವಿದರ ಪರಿಚಯದ ಪ್ರಯತ್ನ ಇಲ್ಲಿ ಅಕ್ಷರಶಃ ಅರ್ಥಪೂರ್ಣವೆನಿಸುತ್ತದೆ. ಅಣ್ಣಾಜಿಯವರು ಬಳ್ಳಾರಿಯ ಡಿ.ಕಗ್ಗಲ್ ಗ್ರಾಮದ ರಾಮನಗೌಡ ಮತ್ತು ವೆಂಕಮ್ಮನವರ ಸುಪುತ್ರನಾಗಿ 01 ಜೂನ್ 1980ರಲ್ಲಿ ಜನಿಸಿದರು. ಬಾಲ್ಯದಲ್ಲಿ ಯಾವುದೇ ರಂಗಾಸಕ್ತಿ ಇಲ್ಲದ ಇವರಿಗೆ ತಮ್ಮದೇ ಊರಿನ ಕಲಾವಿದ ದೊಡ್ಡಬಸವ ಗವಾಯಿಗಳಿಂದ ಪ್ರಭಾವಿತರಾಗಿ ಅವರ ಬಳಿಯಲ್ಲಿ ಸುಗಮ ಸಂಗೀತದ ಅಭ್ಯಾಸ ಮಾಡಿದರು. ಕ್ರಮೇಣ ಅವರ ಸಹಾಯದಿಂದಲ...