Posts

Showing posts from August, 2021

ರಂಗ ಮಾಲಿಕೆ -೩೩ ದಣಿವರಿಯದ ರಂಗ ಸಂಚಾರಿ "ಗುಡಿಹಳ್ಳಿ ನಾಗರಾಜ್"

Image
 ಬಣ್ಣದ ಬದುಕು ರಂಗ ಮಾಲಿಕೆ -೩೨ ದಣಿವರಿಯದ ರಂಗ ಸಂಚಾರಿ " ಗುಡಿಹಳ್ಳಿ ನಾಗರಾಜ್"      ರಂಗಭೂಮಿಗೆ ಪೂರಕವಾಗಿ ಯಾವುದೇ ಕಾರ್ಯ ಕೈಗೊಂಡರು ಅದು ರಂಗ ಕಾಯಕ ಎನಿಸಿಕೊಳ್ಳುತ್ತದೆ. ಆ ನಿಟ್ಟಿನಲ್ಲಿ ತೆರೆಮರೆ ಹಿಂದೆ ಇದ್ದುಕೊಂಡು ಇಡೀ ನಾಡಿನಾದ್ಯಂತ ಸಂಚರಿಸಿ ಎಲೆಮರೆಯ ಕಾಯಿಯಂತಿದ್ದ ಹಲವಾರು ರಂಗಮಣಿಗಳನ್ನು ಗುರುತಿಸಿ, ಮುಖ್ಯ ವಾಹಿನಿಗೆ ತಂದು ಅವರ ಬಣ್ಣದ ಬದುಕಿಗೆ ಬೆಳಕಾದವರೆಂದರೇ ಬಳ್ಳಾರಿಯ ಹೆಮ್ಮೆಯ ಪುತ್ರ ಗುಡಿಹಳ್ಳಿ ನಾಗರಾಜ್.     ಇವರು ಬಿಸಿಲುನಾಡು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕರೆಗುಡಿಹಳ್ಳಿಯ ಚಿಕ್ರಪ್ಪ ಮತ್ತು ಗಂಗಮ್ಮ ಎಂಬ ದಂಪತಿಗಳ ಮಗನಾಗಿ ಕ್ರಿ.ಶ.೧೯೫೪ ರಲ್ಲಿ ಜನಿಸಿದರು.     ಇವರು ವೃತ್ತಿ, ಹವ್ಯಾಸಿ, ಗ್ರಾಮೀಣ ಸೇರಿದಂತೆ ರಂಗಭೂಮಿಯ ಹಲವು ವಿಚಾರಗಳ ಕುರಿತಾದ ಸಮಗ್ರ ಜ್ಞಾನವನ್ನು ಹೊಂದಿದ್ದರು.ರಂಗಭೂಮಿ ಕುರಿತಾದ ಇವರ ಬರಹಗಳು ರಂಗಭೂಮಿ ಇತಿಹಾಸದಲ್ಲಿ ಹಾಸು ಹೊಕ್ಕಾಗಿವೆ.ಅಲ್ಲದೆ ಮುಂದಿನ ಪೀಳಿಗೆಗೆ ದಾಖಲೆಗಳಾಗಿವೆ.ಅಲ್ಲದೇ ಅನೇಕ ರಂಗತAಡಗಳ ರೂವಾರಿಯಾಗಿ ,ತೆರೆಯ ಹಿಂದಿನ ಶಕ್ತಿಯಾಗಿ ರಂಗಕಾಯಕವನ್ನು ಸದ್ದಿಯಿಲ್ಲದೆ ಮಾಡಿ ಸುದ್ಧಿಯಾಗಿದ್ದಾರೆ.   ಇವರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಹುಟ್ಟೂರಿನಲ್ಲಿ ಮುಗಿಸಿದರು.ನಂತರ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಎಂ.ಎ ಇಂಗ್ಲೀಷ್ ಪದವಿ ಗಳಿಸಿ ಊರಿಗೆ ಹಿಂತಿರುಗಿದರು.ಅಲ್ಲದೆ ೧೯೮೦ರಲ್ಲ...

ರಂಗ ಮಾಲಿಕೆ-೩೨ ಕಲಾ ರತ್ನ ವಿ.ರಾಮಚಂದ್ರ

Image
 ಬಣ್ಣದ ಬದುಕು ರಂಗ ಮಾಲಿಕೆ -೩೨ ಕಲಾ ರತ್ನ   ' ವಿ.ರಾಮಚಂದ್ರ' ವೃತ್ತಿಗೆ ಮತ್ತು ವಿದ್ಯೆಗೆ ವ್ಯತಿರಿಕ್ತವಾಗಿ ರಂಗಭೂಮಿಯಲ್ಲಿ ಸಾಧನೆ ಮಾಡಿದವರು ಅನೇಕರಿದ್ದಾರೆ.ಅವರಿಗೆ ಅದು ಸಾಧನೆಯೇ ಸರಿ.ಅಂತಹ ಅನೇಕರಲ್ಲೊಬ್ಬರು ನಮ್ಮ ಬಳ್ಳಾರಿಯ ವಿ‌.ರಾಮಚಂದ್ರ. ಇವರು ವೃತ್ತಿಯಲ್ಲಿ ಉದ್ದಿಮೆದಾರರಾಗಿದ್ದರು, ರಂಗಭೂಮಿಯನ್ನು ಅತೀವವಾಗಿ ಮೆಚ್ಚಿ ಹುಚ್ಚ ಹಚ್ಚಿಸಿಕೊಂಡವರು.ಇಂತಹ ಮಹನೀಯರ ರಂಗ ಸಾಧನೆಯನ್ನು ಅರುಹುವ ಚಿಕ್ಕ ಪ್ರಯತ್ನವೇ ನನ್ನೀ ಲೇಖನ.  ಇವರು ೦೧.೦೮.೧೯೬೪ ರಲ್ಲಿ ಹೊನ್ನೂರಪ್ಪ ಮತ್ತು ಲಕ್ಷ್ಮಮ್ಮ ಎಂಬ ದಂಪತಿಗಳ ಮಗನಾಗಿ ಬಳ್ಳಾರಿಯ ಕಾಕರ್ಲತೋಟದಲ್ಲಿ ಜನಿಸಿದರು. ತಂದೆ ಜಿಲ್ಲಾ ಖಜಾನೆಯಲ್ಲಿ  ಜವಾನರಾಗಿದ್ದರು.ಅಲ್ಲದೇ ಕಲಾಸಕ್ತರಾಗಿದ್ದರು. ಇವರು ತಮ್ಮ ೧೦ನೇ ವಯಸ್ಸಿನಲ್ಲಿ ಆ ಓಣಿಯ ಬಯಲಾಟ ಕಲಾವಿದರಿಗೆ ಮಾತುಗಳನ್ನು ಓದಲು ಹೇಳಿಕೊಡುತ್ತಿದ್ದರು. ಆ ಮೂಲಕ ತಮಗೂ ಅರಿವಾಗದ ರೀತಿಯಲ್ಲಿ ಕಲೆಯು ಇವರನ್ನು ಅರ್ವಿಭವಿಸಿತು.ಅದಲ್ಲದೇ ಓಣಿಯ ಓರಗೆಯವರೊಡನೆ ಸೇರಿ ಗಣೇಶ ಹಬ್ಬದ ಪ್ರಯುಕ್ತ ಪ್ರತಿನಿತ್ಯ ಕಾರ್ಯಕ್ರಮ ಆಯೋಜನೆಯ ಉಸ್ತುವಾರಿ ವಹಿಸಿಕೊಂಡರು.ನಂತರ  ಪಿ.ಯು.ಸಿ ಓದುವಾಗ ಮುನ್ಸಿಪಲ್ ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮದಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮಿನುಗುತಾರೆ ಎನಿಸಿದರು.ಇದಾದ ನಂತರ ರಾಘವ ಕಲಾ ಮಂದಿರದಲ್ಲಿ ನಡೆಯುತ್ತಿದ್ದ ನಾಟಕಗಳ ವೀಕ್ಷಣೆಯ ಪ್ರೇರಣೆಯೇ ರಂಗಭೂಮಿಗೆ ಧುಮುಕುವಂತೆ ಮಾಡಿತು...

ರಂಗ ಮಾಲಿಕೆ -೩೧ ಕಾರಂತ ರತ್ನ ' ಮುದ್ದಟನೂರು ಜಿ.ವೀರನಗೌಡ

Image
  ಬಣ್ಣದ ಬದುಕು ರಂಗ ಮಾಲಿಕೆ -೩೧ ಕಾರಂತ ರತ್ನ " ಮುದ್ದಟನೂರು ಜಿ.ವೀರನಗೌಡ" ಕಲೆಯ ಕಲಿಕೆಗಾಗಿಯೇ ಹುಟ್ಟೂರು ,ಹೆತ್ತವರ ತೊರೆದು ಹೋಗಿ ಕಲಿತು ನಂಬಿದವರ ಕಣ್ಣಲ್ಲಿ ಅರಳಿ ಹೂಗಳ ಸಂಖ್ಯೆ ಅದೇಷ್ಟೋ .ಅಂತಹ ಒಂದು ರಂಗ ಪುಷ್ಪ  ನಮ್ಮ ಸಿರಿನಾಡಿನ ಸಿರುಗುಪ್ಪ ಕಾಣಸಿಗುವುದು.ಅವರ ನೈಜ ಬದುಕಿನ ಸಾರವೇ ಈ ಲೇಖನ ಆಶಯ.ಅವರೇ ಮುದ್ದಟನೂರು ಜಿ. ವೀರನಗೌಡ.    ಇವರು ಕ್ರಿ.ಶ.೧೯೫೫ ರಲ್ಲಿ ಶ್ರೀ ಚಂದ್ರೇಗೌಡ ಮತ್ತು ಶ್ರೀಮತಿ ಸೀತಮ್ಮ ಎಂಬ ದಂಪತಿಗಳ ಮಗನಾಗಿ ಬಳ್ಳಾರಿ ಜಿಲ್ಲಾ ಸಿರುಗುಪ್ಪ ತಾಲ್ಲೂಕಿನ ಮುದ್ದಟನೂರು ಗ್ರಾಮದಲ್ಲಿ ಜನಿಸಿದರು.    ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರಿಂದ ಇವರ ಶಿಕ್ಷಣ ಕೇವಲ ೬ನೇ ತರಗತಿಗೆ ಸಿಮೀತವಾಯಿತು.ಅಲ್ಲದೇ  ತಾತ ಮತ್ತು ತಂದೆ ಬಯಲಾಟ ಕಲಾವಿದರು ಮತ್ತು ನಿರ್ದೇಶಕರಾಗಿದ್ದರಿಂದ  ಬಯಲಾಟ ಕಲೆ ರಕ್ತಗತವಾಗಿ ಬಂದಿತು. ಬಾಲ್ಯದಿಂದಲೂ ನಟನೆ,  ಸಂಗೀತದಲ್ಲಿ ಅತೀವ ಹಂಬಲ ಇದ್ದಿದ್ದರಿಂದ ೧೫ ನೇ ವಯಸ್ಸಿಗೆ ಮನೆ ಬಿಟ್ಟು ಹೋಗಿ ಹುಬ್ಬಳ್ಳಿ ಸೇರಿದರು.ಅಲ್ಲದೇ ಅವರಿವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿಯ ಕೊಳಲು ವಾದಕ ಕೃಷ್ಣಮೂರ್ತಿಯವರ ಬಳಿ ಸಂಗೀತಾಭ್ಯಾಸಕ್ಕಾಗಿ ಸೇರಿಕೊಂಡರು.  ಶ್ರದ್ಧೆ,ಭಕ್ತಿ,ಒಲವಿನಿಂದಲೇ ಸಂಗೀತ ಒಲಿಸಿಕೊಂಡು ಹುಟ್ಟೂರಿಗೆ ಬರುತ್ತಾರೆ. ನಂತರ ಮುದ್ದಾಪುರ ನಾಟಕ ಮಾಸ್ತರ್ ಪಂಪಾಪತಿಯವರ ಬಳಿ ಹಾರ್ಮೋನಿಯಂ ಅಭ್ಯಾಸ ಮಾಡಿದರು.   ...