Posts

Showing posts from January, 2024

ರಂಗ ಮಾಲಿಕೆ -೬೭ ಮುಟ್ಟೆಸೂಗೂರು ವೆಂಕಟರೆಡ್ಡಿ

ಸಿರಿನಾಡಿನ ಬಹುಮುಖ ಪ್ರತಿಭೆ ‘ಮಿಟ್ಟೆಸೂಗೂರು ವೆಂಕಟರೆಡ್ಡಿ’. ಪ್ರತಿಯೊAದು ನಾಡಿನ ನಿಜವಾದ ಸಾಂಸ್ಕೃತಿಕ ರಾಯಭಾರಿಗಳು ಎಂದರೆ ಅದು ಹಳ್ಳಿಗರು. ಅವರ ರಂಗಭೂಮಿಯ ಹೆಜ್ಜೆಗಳೇ ಅವರ ನಿಜವಾದ ಶ್ರೀಮಂತಿಕೆ ಎಂದು ನಂಬಿದವರು, ಅದರಂತೆ ನಡೆದವರು ಕೂಡ. ಈ ಮನೋಮಾರ್ಗದಲ್ಲಿ ನುಡಿದು ನಡೆದ ರಂಗಕರ್ಮಿಯ ಪರಿಚಯ ಇಲ್ಲಿ ಮಾಡಲೊರಟ್ಟಿದ್ದೇನೆ. ಅವರ ಹೆಸರು ಮಿಟ್ಟೆಸೂಗೂರು ವೆಂಕಟರೆಡ್ಡಿ. ಇವರು ಸಿರುಗುಪ್ಪ ಮತ್ತು ಆದೋನಿ ಗಡಿಭಾಗದ ಶ್ರೇಷ್ಠ ಗಮಕಿಗಳು, ಪುರಾಣ ಪ್ರವಚಕರು, ಮುತ್ಸದ್ಧಿ ಮುಖಂಡರು, ಸಾಹಿತಿಗಳು ಹಾಗೂ ರಂಗಕರ್ಮಿಗಳು ಕೂಡ ಆಗಿದ್ದಾರೆ. ಹೀಗೆ ತಮ್ಮ ಬಹುಮುಖ ಪ್ರತಿಭೆಯ ಮೂಲಕವೇ ಈ ಭಾಗದಲ್ಲಿ ಹೆಸರಾಗಿದ್ದಾರೆ. ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮಿಟ್ಟೆಸೂಗೂರು ಗ್ರಾಮದವರಾದ ಹನುಮಂತರೆಡ್ಡಿ ಮತ್ತು ಲಿಂಗಮ್ಮ ಎಂಬ ಉಳ್ಳವರ ಕುಟುಂಬದಲ್ಲಿ ಏಕೈಕ ಮಗನಾಗಿ ಕ್ರಿ.ಶ.೧೯೪೬ರಲ್ಲಿ ಜನಿಸಿದರು. ಇವರು ತಮ್ಮ ಆರಂಭಿಕ ಶಿಕ್ಷಣವನ್ನು ಆಗೀನ ‘ಅಯ್ಯನವರ ಶಾಲೆ’ಯಲ್ಲಿ ಗುರುಗಳಾಗಿದ್ದ ‘ಸಾಲಿ ಭೀಮಯ್ಯ’ರ ಬಳಿ ಮತ್ತು ಈಗಿನ ಆಂಧ್ರದ ಹೆಬ್ಬುಟ ಗ್ರಾಮದಲ್ಲಿ ಅಂದಿನ ಕಾಲಕ್ಕೆ ಇಂಗ್ಲಿಷಿನಲ್ಲಿ ನಿರರ್ಗಳವಾಗಿ ಮಾತಾನಾಡುತ್ತಿದ್ದ ‘ಬಸರಳ್ಳಿ ಸಿದ್ರಾಮಯ್ಯ’ರ ಬಳಿ ಪಡೆಯುತ್ತಾರೆ. ಆದರೆ ಇವರು ಬಾಲ್ಯದಲ್ಲಿ ತುಂಬಾ ತುಂಟರಾಗಿದ್ದರಿAದ ಇವರ ಉಪಟಳವನ್ನು ನೋಡಲಾಗದೆ ತಂದೆಯವರ ಆಧ್ಯಾತ್ಮಿಕ ಗುರುವಾಗಿದ್ದ ‘ಹರಿವಾಣದ ಭದ್ರಯ್ಯ ಸ್ವಾಮಿ’ಗಳ ಮಾತಿನಂತೆ ಆದ...

ರಂಗ ಮಾಲಿಕೆ -೬೬ ಅಗಸನೂರು ದತ್ತಪ್ಪ

ಬಣ್ಣದ ಲೋಕದಿಂದ ಮರೆಯಾದ ಕಲಾರತ್ನ ‘ಅಗಸನೂರು ದತ್ತಪ್ಪ' ಸಮಾಜದಲ್ಲಿ ಯಾವುದೇ ಒಂದು ವಸ್ತು, ವ್ಯಕ್ತಿ, ವಿಷಯದ ಕುರಿತಾದ ಅಲ್ಪಸ್ವಲ್ಪ ಅವಶೇಷ ಅಥವಾ ಇತಿಹಾಸದ ಕುರುಹುಗಳು ಇಲ್ಲದೇ ಹೋದರೆ, ಹಿಂದೆ ಆ ವಿಚಾರ ಎಷ್ಟೇ ಪ್ರಸಿದ್ಧಿಯಾಗಿದ್ದರೂ ಅದನ್ನು ಕಾಲಕ್ರಮೇಣ ಮರೆತುಬಿಡುತ್ತಾರೆ. ಅದರ ಪುನರುಚ್ಛಾರವಾಗದ ಹೊರತು ಅದು ಅಸ್ತಿತ್ವದಲ್ಲಿ ಉಳಿಯುವುದಿಲ್ಲ ಎಂಬುದಕ್ಕೆ ನಾಡು ನುಡಿ ಕಂಡ ಶ್ರೇಷ್ಠ ಕಲಾ ದಿಗ್ಗಜ ‘ಅಗಸನೂರು ದತ್ತಪ್ಪ' ಒಂದು ನೈಜ ನಿದರ್ಶನ. ದತ್ತಪ್ಪನವರು ೨೦ನೇ ಶತಮಾನದ ಆದಿಯಲ್ಲಿ ಕರ್ನಾಟಕಾಂಧ್ರದ ಗಡಿಭಾಗದ ಸಾಂಸ್ಕೃತಿಕ ಪರಂಪರೆಯಲ್ಲಿ ಅದ್ಭುತ ಕಲಾಕರನಾಗಿ ಬಾಳಿ ಬದುಕಿದ ಮಹಾ ಮೇಧಾವಿ. ಆದರೆ ಅವರು ಹತರಾದ ನಂತರ ಕಾಲಕ್ರಮೇಣ ಅವರ ಅವಶೇಷಗಳು ಕಲಾ ಲೋಕದಿಂದ ಕಣ್ಮರೆಯಾದದ್ದು ನೆನೆದರೆ ತುಂಬಾ ವಿಷಾಧನೀಯವೆನಿಸುತ್ತದೆ. ಇವರು ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಗಡಿನಾಡಿನ ಹಳ್ಳಿ ಅಗಸನೂರಿನವರು. ತಂದೆ ಗಡ್ಡೆ ತಿಮ್ಮಣ್ಣನಾಯಕ ತಾಯಿ ಮಾರೆಮ್ಮ. ಬಡ ಕೃಷಿಕ ಕುಟುಂಬದಲ್ಲಿ ೦೬.೦೨.೧೯೩೨ರಲ್ಲಿ ಜನಸಿದ ಇವರಿಗೆ ತಾಯಿಯೇ ಮೂಲ ಪ್ರೇರಣೆ. ಮಾರೆಪ್ಪ ಇವರ ಮೊದಲ ಹೆಸರು. ಮಾರೆಪ್ಪನಿಂದ ದತ್ತಪ್ಪ, ದತ್ತಾತ್ರೇಯ ಆದ ಸಂಗತಿಗಳು ತುಂಬಾ ರೋಚನೀಯವಾಗಿವೆ. ರೈತಾಪಿ ಕೆಲಸಗಳಲ್ಲಿ ಜನಪದ ಗೀತೆಗಳನ್ನು ಹಾಡುತ್ತಾ ಮೈಮನಸ್ಸಿನ ಭಾರ ಇಳಿಸಿಕೊಳ್ಳುತ್ತಿದ್ದ ಮಾರೆಮ್ಮರಿಗೆ ಮಗನದೇ ದೊಡ್ಡ ಚಿಂತೆ. ಆತನನ್ನು ವಿದ್ಯಾವಂತನನ್ನಾಗಿ ಮತ...

ರಂಗ ಮಾಲಿಕೆ -೬೫ ಬಳ್ಳಾರಿ ನೆಲದ ಮಹಾ ಚೇತನ ವೈ.ನಾಗೇಶಶಾಸ್ತ್ರಿಗಳು.

ಬಳ್ಳಾರಿ ನೆಲದ ಮಹಾನ್ ಚೇತನ 'ಸರ್ವದರ್ಶನ ತೀರ್ಥ ವೈ.ನಾಗೇಶ ಶಾಸ್ತ್ರಿಗಳು'. ವ್ಯಕ್ತಿಯೊಬ್ಬ ಒಂದು ನಾಡಿನ ಗಡಿರೇಖೆಯನ್ನು ಗುರುತಿಸುವಲ್ಲಿ ಸಹಾಯವಾಗುತ್ತಾನೆ ಎಂದರೆ, ಬಹುತೇಕ ನಂಬಿಕೆಗೆ ದೂರವಾದ ಮಾತು ಎಂದು ಮೂಗು ಮುರಿಯುವ ಜನರಿದ್ದಾರೆ. ಆದರೆ ಹಲವು ದಶಕಗಳ ಹಿಂದೆ ಅಂತಹದ್ದೊಂದು ನಿದರ್ಶನ ಕಣ್ಮುಂದೆ ನಡೆದುದನ್ನು ನಾವೂ ಈಗಲೂ ಅರಿಯಬಹುದು. ಬಳ್ಳಾರಿಯಂಥ ದ್ವಿಭಾಷಾ ವಾತಾವರಣದ ಜಿಲ್ಲೆಯಲ್ಲಿ ಹುಟ್ಟಿ, ಶೈಕ್ಷಣಿಕ ಪ್ರತಿಕೂಲ ವಾತಾವರಣದಲ್ಲಿ ಬೆಳೆದು, ತಮ್ಮ ಬದುಕಿನ ಬಹುಕಾಲವನ್ನು ಅಲ್ಲಿಯೇ ಕಳೆದು ಸರ್ವದರ್ಶನತೀರ್ಥ, ಸಾಂಖ್ಯತೀರ್ಥಗಳಂಥ ವಿದ್ವತ್ಪದವಿಗಳನ್ನು ಸಂಪಾದಿಸಿ, ಕನ್ನಡದ ಎರಡು ಅರಸು ಮನೆತನಗಳ ಆಸ್ಥಾನ ವಿದ್ವಾಂಸರಾಗಿ, ಸಂಸ್ಕೃತ ಕಾವ್ಯಗಳನ್ನು ಕನ್ನಡಕ್ಕೆ ಅನುವಾದ ಮಾಡಿ, ಕನ್ನಡ ಕಲಿಯುವವರಿಗೆ ಕಲಿಸುವವರಾಗಿ, ಕಲಿತವರಿಗೆ ಸಂಘಟಕರಾಗಿ, ಸಂಘಟಕರಿಗೆ ಮಾರ್ಗದರ್ಶಕರಾಗಿ ತಮ್ಮ ನಲವತ್ತನೇ ವಯಸ್ಸಿನಲ್ಲಿಯೇ ಒಂದು ನಾಡಿನ ಸಂಸ್ಕೃತಿಯ ಪ್ರಮುಖ ವಿದ್ಯಮಾನವಾದ ೧೯೩೩ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ೧೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನು ಪಡೆದವರೇ 'ಪಂಡಿತ ವೈ.ನಾಗೇಶ ಶಾಸ್ತ್ರಿಗಳು'. ಇವರು ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕಿನ ಏಳುಬೆಂಚಿ ಗ್ರಾಮದಲ್ಲಿ ನೀಲಮ್ಮ ಮತ್ತು ನಯನಯ್ಯ ಎಂಬ ಬಡಜಂಗಮ ದಂಪತಿಗಳ ಏಳನೇ ಮಗನಾಗಿ ೧೮೯೩ರಲ್ಲಿ ಜನಸಿದರು. ಶಾಸ್ತ್ರಿಗಳ ಮೊದಲ ಹೆಸರು ನಾಗಯ್ಯ. ಇವರ ಕುಟು...