ರಂಗ ಮಾಲಿಕೆ -೬೭ ಮುಟ್ಟೆಸೂಗೂರು ವೆಂಕಟರೆಡ್ಡಿ
ಸಿರಿನಾಡಿನ ಬಹುಮುಖ ಪ್ರತಿಭೆ ‘ಮಿಟ್ಟೆಸೂಗೂರು ವೆಂಕಟರೆಡ್ಡಿ’. ಪ್ರತಿಯೊAದು ನಾಡಿನ ನಿಜವಾದ ಸಾಂಸ್ಕೃತಿಕ ರಾಯಭಾರಿಗಳು ಎಂದರೆ ಅದು ಹಳ್ಳಿಗರು. ಅವರ ರಂಗಭೂಮಿಯ ಹೆಜ್ಜೆಗಳೇ ಅವರ ನಿಜವಾದ ಶ್ರೀಮಂತಿಕೆ ಎಂದು ನಂಬಿದವರು, ಅದರಂತೆ ನಡೆದವರು ಕೂಡ. ಈ ಮನೋಮಾರ್ಗದಲ್ಲಿ ನುಡಿದು ನಡೆದ ರಂಗಕರ್ಮಿಯ ಪರಿಚಯ ಇಲ್ಲಿ ಮಾಡಲೊರಟ್ಟಿದ್ದೇನೆ. ಅವರ ಹೆಸರು ಮಿಟ್ಟೆಸೂಗೂರು ವೆಂಕಟರೆಡ್ಡಿ. ಇವರು ಸಿರುಗುಪ್ಪ ಮತ್ತು ಆದೋನಿ ಗಡಿಭಾಗದ ಶ್ರೇಷ್ಠ ಗಮಕಿಗಳು, ಪುರಾಣ ಪ್ರವಚಕರು, ಮುತ್ಸದ್ಧಿ ಮುಖಂಡರು, ಸಾಹಿತಿಗಳು ಹಾಗೂ ರಂಗಕರ್ಮಿಗಳು ಕೂಡ ಆಗಿದ್ದಾರೆ. ಹೀಗೆ ತಮ್ಮ ಬಹುಮುಖ ಪ್ರತಿಭೆಯ ಮೂಲಕವೇ ಈ ಭಾಗದಲ್ಲಿ ಹೆಸರಾಗಿದ್ದಾರೆ. ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮಿಟ್ಟೆಸೂಗೂರು ಗ್ರಾಮದವರಾದ ಹನುಮಂತರೆಡ್ಡಿ ಮತ್ತು ಲಿಂಗಮ್ಮ ಎಂಬ ಉಳ್ಳವರ ಕುಟುಂಬದಲ್ಲಿ ಏಕೈಕ ಮಗನಾಗಿ ಕ್ರಿ.ಶ.೧೯೪೬ರಲ್ಲಿ ಜನಿಸಿದರು. ಇವರು ತಮ್ಮ ಆರಂಭಿಕ ಶಿಕ್ಷಣವನ್ನು ಆಗೀನ ‘ಅಯ್ಯನವರ ಶಾಲೆ’ಯಲ್ಲಿ ಗುರುಗಳಾಗಿದ್ದ ‘ಸಾಲಿ ಭೀಮಯ್ಯ’ರ ಬಳಿ ಮತ್ತು ಈಗಿನ ಆಂಧ್ರದ ಹೆಬ್ಬುಟ ಗ್ರಾಮದಲ್ಲಿ ಅಂದಿನ ಕಾಲಕ್ಕೆ ಇಂಗ್ಲಿಷಿನಲ್ಲಿ ನಿರರ್ಗಳವಾಗಿ ಮಾತಾನಾಡುತ್ತಿದ್ದ ‘ಬಸರಳ್ಳಿ ಸಿದ್ರಾಮಯ್ಯ’ರ ಬಳಿ ಪಡೆಯುತ್ತಾರೆ. ಆದರೆ ಇವರು ಬಾಲ್ಯದಲ್ಲಿ ತುಂಬಾ ತುಂಟರಾಗಿದ್ದರಿAದ ಇವರ ಉಪಟಳವನ್ನು ನೋಡಲಾಗದೆ ತಂದೆಯವರ ಆಧ್ಯಾತ್ಮಿಕ ಗುರುವಾಗಿದ್ದ ‘ಹರಿವಾಣದ ಭದ್ರಯ್ಯ ಸ್ವಾಮಿ’ಗಳ ಮಾತಿನಂತೆ ಆದ...