Posts

Showing posts from September, 2021

ರಂಗ ಮಾಲಿಕೆ -೩೬ ಕರ್ನಾಕಾಂಧ್ರ ರಂಗಭೂಮಿಯ ಅಭಿಜಾತ ರಂಗತಾರೆ " ಬಳ್ಳಾರಿ ಲಲಿತಮ್ಮ"

Image
 ಬಣ್ಣದ ಬದುಕು ರಂಗ ಮಾಲಿಕೆ - ೩೬ ಕರ್ನಾಟಕಾಂಧ್ರ ರಂಗಭೂಮಿಯ ಅಭಿಜಾತ ರಂಗತಾರೆ " ಬಳ್ಳಾರಿ ಲಲಿತಮ್ಮ ".   ಬಹುತೇಕ ಕಲಾವಿದರು ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಹೋಗಿ ಹೆಸರಾಗಿ ಅಲ್ಲಿಯೇ ನೆಲೆಯೂರಿ ಆಗಾಗ ಮಾತ್ರ ಹವ್ಯಾಸಿಕ್ಕಾಗಿ ರಂಗಭೂಮಿ ಅರಿಸಿದ್ದನ್ನು ನಾವೂ ನೀವೂ ಕಾಣಬಹುದು.ಆದರೆ ಸಿನಿರಂಗದಲ್ಲಿ ಉತ್ತುಂಗಕ್ಕೆ ಏರಿದ್ದರು.ಸಿನಿ ಕ್ಷೇತ್ರವನ್ನು ಸ್ವ ಇಚ್ಛೆಯಿಂದ ತ್ಯಜಿಸಿ. ರಂಗಭೂಮಿಗೆ ಬಂದು ವೃತ್ತಿರಂಗಭೂಮಿಯನ್ನು ಪುನಶ್ಚೇತನಗೊಳಿಸಿದ ವಿರಾತಿವಿರಳಲ್ಲಿ ಒಬ್ಬರು ನಮ್ಮ ಬಳ್ಳಾರಿ ರಂಗಭೂಮಿಯ ಹೊಳೆವ ರಂಗ ತಾರೆ " ಬಳ್ಳಾರಿ ಲಲಿತಮ್ಮ".  ಇವರು ಕ್ರಿ.ಶ.09.01.1923ರಲ್ಲಿ ತಿಮ್ಮಪ್ಪ ಮತ್ತು ವೀರಮ್ಮ ಎಂಬ ದಂಪತಿಗಳ ಮಗಳಾಗಿ ಅನಂತಪುರ ಜಿಲ್ಲೆಯ ಉರವಕೊಂಡ ಜಿಲ್ಲೆಯ ಅಮಿದ್ಯಾಲ ಎಂಬಲ್ಲಿ ಜನಿಸಿದರು.ಅಪ್ಪ ಪ್ರಸಿದ್ಧ ಪಿಟೀಲು ವಾದಕರು, ಅಮ್ಮ ರಂಗಾಸಕ್ತರು,ಅಕ್ಕ ವೆಂಕಮ್ಮ ಮತ್ತು ತಂಗಿ ರತ್ನಮಾಲಾ ಖ್ಯಾತ ರಂಗನಟಿಯರು ಹಾಗೂ ಸುಶ್ರಾವ್ಯ ಗಾಯಕಿಯರು,ನೃತ್ಯಗಾರರು. ಹಾಗಾಗಿ ಲಲಿತಮ್ಮನವರಿಗೂ ಸಹ ಕಲೆಯು ರಕ್ತಗತವಾಗಿ ಬಂದಿದೆ. ಇವರು ತಮ್ಮ ಹುಟ್ಟೂರಿನಲ್ಲೇ ತೆಲುಗು ಮಾಧ್ಯಮದಲ್ಲಿ ೫ ನೇ ತರಗತಿಯವರೆಗೆ ವಿಧ್ಯಾಭ್ಯಾಸ ಮಾಡಿದರು.ನಂತರ ಅಕ್ಕ ವೆಂಕಮ್ಮನವರು ಶ್ರೀಮಂತರ ಮನೆಯ ಅಂಗಳದಲ್ಲಿ ಮದುವೆ ಸಮಾರಂಭದಲ್ಲಿ ಹಾಡುವುದಕ್ಕೆ ಹೋಗುವಾಗ ಇವರನ್ನು ಕರೆದೊಯ್ದರು. ಈ ಮೂಲಕ ಶಾಸ್ತ್ರೀಯ ಹಾಡುಗಾರಿಕೆ ಮತ್ತು ಭರತನಾಟ್ಯವನ್ನು ಕಲಿತ...

ರಂಗ ಮಾಲಿಕೆ -೩೫ ಗಡಿನಾಡಿನ ರಂಗ ಶಿಕಾರಿ ' ಎಂ.ಪಿ.ಪ್ರಕಾಶ್ '

Image
 ಬಣ್ಣದ ಬದುಕು ರಂಗ ಮಾಲಿಕೆ - ೩೫ ಗಡಿನಾಡಿನ ರಂಗ ಶಿಕಾರಿ 'ಎಂ.ಪಿ.ಪ್ರಕಾಶ್' ಕಲಾಭಿರುಚಿ ಇರೋ ಎಷ್ಟೋ ರಾಜಕಾರಣಿಗಳನ್ನು ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ.ಅದರಲ್ಲೂ ಸ್ವತಃ ನಟರಾಗಿ,ನಿರ್ದೇಶಕರಟಗಿ ,ಸಂಘಟಕರಾಗಿ ಜೀವಿತಾವಧಿಯವರೆಗೂ 'ಕಲೆಯೇ ಉಸಿರು' ಎಂದು ಬದುಕಿದ್ದವರ ಪರಿಚಯ ಕಿವಿಗೂ ಆಗಿರುವುದಿಲ್ಲ.ಅಂತಹ ಮಹನೀಯರ ಸಾಲಿನಲ್ಲಿ ನಿಲ್ಲಬಲ್ಲ ಬಳ್ಳಾರಿಯ ಮತ್ತೋರ್ವ ರಂಗ ಸಾಧಕರೆಂದರೆ ಅದು ಎಂ.ಪಿ.ಪ್ರಕಾಶರು.   ಎಂ. ಪಿ. ಪಿ ಎಂದೇ ಕರೆಯಲ್ಪಡುತಿದ್ದ ಇವರೊಬ್ಬ ಉತ್ತಮ ರಾಜಕೀಯಪಟು, ನಾಡು ಕಂಡ ಸಜ್ಜನ ರಾಜಕಾರಣಿ, ಅಜಾತಶತ್ರು. ಹಂಪಿ ಉತ್ಸವದ ರೂವಾರಿಗಳಾದ ಇವರು ಉಪಮುಖ್ಯಮಂತ್ರಿಗಳಾಗಿ, ಗೃಹ, ಕಂದಾಯ, ಕಾನೂನು, ಗ್ರಾಮೀಣಾಭಿವೃಧ್ಧಿ ಸೇರಿ ಇತರ ಖಾತೆಗಳನ್ನು ನಿರ್ವಹಿಸಿದ್ದರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲೆಗಳಲ್ಲಿ ವಿಶೇಷವಾಗಿ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದರು.   ಇವರು ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣಕ್ಕೆ ದುಡಿದ ವಲ್ಲಭಾಪುರದ ಮರಿಸ್ವಾಮಿ ಮಠದ ಪಾಟೀಲರ ಮಗನಾಗಿ ೧೯೪೦ ಜುಲೈ ೧೧ರಂದು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ನಾರಾಯಣ ದೇವರಕರೆ ಎಂಬಲ್ಲಿ ಜನಿಸಿದರು. ಕಲೆ ಮತ್ತು ಸ್ವಾತಂತ್ರ್ಯ ಹೋರಾಟದ ಪರಿಸರದಲ್ಲಿ ಜನಿಸಿದ ಇವರು ತಮ್ಮ ದೊಡ್ಡಪ್ಪ ಆ ಕಾಲಕ್ಕೆ ಪೂನಾದ ಗಂಧರ್ವ ವಿದ್ಯಾಲಯದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಭ್ಯಾಸ ಮುಗಿಸಿ ಧಾರವಾಡದ ಆಕಾಶವಾಣಿಯಲ್ಲಿ ಬಿ ಕ್ಲ...

ರಂಗ ಮಾಲಿಕೆ -೩೪ ಕಲಾ ಕಿನ್ನರ ' ಡಿ.ದುರ್ಗಾದಾಸ್'

Image
 ಬಣ್ಣದ ಬದುಕು ರಂಗ ಮಾಲಿಕೆ -೩೪ ಕಲಾ ಕಿನ್ನರ ಮರಿಯಮ್ಮನಹಳ್ಳಿ 'ಡಿ‌.ದುರ್ಗಾದಾಸ್' . ಮರಿಯಮ್ಮನ ಹಳ್ಳಿ ಎಂದರೆ ಅದೊಂದು ಕಲೆಯ ತವರೂರು ಎಂದೇ ಬಹುತೇಕ ಜನರಿಗೆ ಗೊತ್ತಿರುವ ವಿಷಯ.ಆದರೆ ಈ ಊರಿಗೆ ಇಂತಹ ಒಂದು ಅನ್ವರ್ಥಕ ಬರುವಲ್ಲಿ ಪ್ರಮುಖ ಪಾತ್ರಧಾರಿಯೆಂದರೆ ಕಲಾರಾಧಕ "ಡಿ.ದುರ್ಗಾದಾಸ್".ಇಂದಿನ ಅನೇಕ ಕಲಾಸಕ್ತ ಮನಸ್ಸುಗಳಿಗೆ ಅವರ ಹೆಸರು ಕೇವಲ ಮರಿಯಮ್ಮನಹಳ್ಳಿಯ ರಂಗ ಮಂದಿರವೊಂದರ ಹೆಸರೆಂಬುದು ಮಾತ್ರ ಗೊತ್ತಿದೆ.ಆದರೆ ಅವರ ರಂಗ ಬದುಕಿನ ಶ್ರೇಷ್ಠತೆಯ ಅರಿವು ಬಹುತೇಕರಿಗೆ ಇಲ್ಲವಾಗಿದೆ.   ಇವರು ಬಳ್ಳಾರಿಯ ಜಿಲ್ಲೆಯ ಅಂದಿನ ನಾರಾಯಣದೇವರ ಕೆರೆ ಎಂಬ ಪುಟ್ಟ ಗ್ರಾಮದಲ್ಲಿ ದಾದಮ್ಮನವರ ಹುಲುಗೆಪ್ಪ ಮತ್ತು ಹನುಮವ್ವ ಎಂಬ ದಂಪತಿಗಳ ಮಗನಾಗಿ ಕ್ರಿ.ಶ.೧೯.೦೨.೧೯೧೭ರಲ್ಲಿ ಜನಿಸಿದರು.ದುರ್ಗದಾಸರ ಇಡೀ ಕುಟುಂಬ ವಾಮನರಾವ್ ರ ನಾಟಕ ಕಂಪನಿಯಲ್ಲಿ ದುಡಿಯುತ್ತಿದ್ದರಿಂದ ಇವರಿಗೂ ಸಹ ರಂಗಕಾಯಕದ ಗೀಳು ಮೂಲತಃ ಹುಟ್ಟಿನಿಂದಲೇ ಆರಂಭವಾಯಿತು.ಇವರ ಜನನಕ್ಕೂ ಪೂರ್ವದಲ್ಲೇ ಇವರ ತಂದೆ ತಾಯಿಯವರು ಕಂಪನಿಯ ಶ್ರೇಷ್ಠ ನಟರೆನಿಸಿದ್ದರು.ಇವರ ಹಾದಿಯಲ್ಲೇ ದುರ್ಗಾದಾಸ್ ರ ಅಕ್ಕಂದಿರಾದ ದಾದಮ್ಮನವರ ಅಂಜಿನಮ್ಮ ಹಾಗೂ ಸಂಜೀವಮ್ಮ ಇಬ್ಬರೂ ವಾಮನರಾವ್ ಕಂಪನಿಯ ಶ್ರೇಷ್ಠ ನಟಿ ಎಂದು ಕರೆಸಿಕೊಂಡಿದ್ದರು.ಅಂಜಿನಮ್ಮ  ' ಎನಗೇಕೆ ಲಗ್ನದ ಬಂಧಿ , ಮನ ಒಪ್ಪಿದ ವರನೇ ಚೆಂದ' ಎಂದು ವೇದಿಕೆ ಮೇಲೆ ಸುಶ್ರಾವ್ಯವಾಗಿ ಹಾಡುತ್ತಾ ಜನಮನ ಗೆದ್ದು  ಹಾಡ...