Posts

Showing posts from June, 2018
Image
ಯೋಗ ಹುಟ್ಟಿದ ದೇಶದಲ್ಲೇ ಯೋಗಕ್ಕೆ ಮಾನ್ಯತೆಯಿಲ್ಲ - ಕುಲಪತಿ ಪ್ರೊ.ವೇಣುಗೋಪಾಲ್                                                                                                                                                                                                                                                               ಯೋಗ ಕೇವಲ ಇಂದು ವಯೋವೃದ್ಧರಿಗೆ ಸೀಮಿತ ಎ...
Image
ಕಲಾವಿದರು ಸರ್ವಕಾಲಕ್ಕೂ ಸಲ್ಲುವ ಅತಿ ಶ್ರೇಷ್ಠರು - ಡಾ.ಕೆ.ಆರ್.ವೇಣುಗೋಪಾಲ್ ಕಲಾವಿದರು ಎಲ್ಲರನ್ನೂ ಪ್ರಭಾವಿತಗೊಳಿಸುವ ಮೂಲಕ ಎಲ್ಲರಿಂದ ಪ್ರಶಂಸನೆಗೊಳ್ಳುತ್ತಾರೆ. ಅಲ್ಲದೇ ತಮ್ಮ ಅಭಿನಯದ ಮೂಲಕವೇ ಜನ್ನ ಮನ್ನಣೆ ಪಡೆದು ಸರ್ವಕಾಲಕ್ಕೂ ಸಲ್ಲುವ ಅತಿಶ್ರೇಷ್ಠರೆನಿಸುತ್ತಾರೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ವೇಣುಗೋಪಾಲ್ ಅಭಿಪ್ರಾಯಪಟ್ಟರು. ವಿ.ವಿಯ ಡಾ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ನೃತ್ಯ ವಿಭಾಗದ ವಿದ್ಯಾರ್ಥಿಗಳ ಪರೀಕ್ಷಾರ್ಥ ನೃತ್ಯ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡುತ್ತಾ ಕಲೆ ಕೇವಲ ವಿಲಾಸಕ್ಕಲ್ಲದೇ ಅದು ಮನುಷ್ಯನ ಉತ್ತಮ ವಿಕಾಸಕ್ಕೂ ಪೂರಕವಾಗಿದೆ. ಆ ಮೂಲಕವೇ ಮಾನವರ ಸರ್ವಾಗೀಣ ಅಭಿವೃದ್ಧಿಯು ಸಾಧ್ಯ. ಆದ್ದರಿಂದ ಕಲಾಸಕ್ತರಾಗುವ ಅಥವಾ ಕಲಾವಿದರಾಗುವ ಮೂಲಕ ಸಮಾಜಮುಖಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ನಂತರ ಕುಲಸಚಿವ ಡಾ.ಬಿ.ಕೆ.ರವಿ ಮಾತಾನಾಡಿ ಇಡೀ ಬೆಂಗಳೂರು ವಿಶ್ವವಿದ್ಯಾಲಯದ ಘನತೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೊಳಗುವಂತೆ ಮಾಡಿದ ಕೀರ್ತಿ ಪ್ರದರ್ಶನ ಕಲಾ ವಿಭಾಗಕ್ಕೆ ಸಲ್ಲುತ್ತದೆ. ಅಲ್ಲದೇ ವಿಶ್ವ ಥಿಯೇಟರ್ ಒಲಂಪಿಕ್‌ನಲ್ಲಿ  ದಕ್ಷಿಣ ಭಾರತದಿಂದ ಭಾಗವಹಿಸಿದ ಏಕೈಕ ವಿಶ್ವವಿದ್ಯಾಲಯವೆಂಬ ಗೌರವವನ್ನು ಹೊಂದಿದೆ.ಈ ಎಲ್ಲ ಸಾಧನೆಗೆ ಪ್ರಮುಖ ಕಾರಣವೆಂದರೆ ಅದು ಕಲೆ. ಅಂತೆಯೇ ಕಲೆಯನ್ನು ಶಕ್ತಿವಿದ್ಯೆ ಎಂದಿದ್ದಾರೆ ಎಂದು ಅವರು ನುಡಿದರು. ...
Image
 ಬಳ್ಳಾರಿಯ ವೃತ್ತಿ ರಂಗಭೂಮಿ ಇತಿಹಾಸದಲ್ಲಿ ಹಚ್ಚಳಿಯದ ಹೆಸರಾದ ಸುಭದ್ರಮ್ಮ ಮನ್ಸೂರ್, ವೀಣಾ ಆದೋನಿ,ಸುಜಾತಮ್ಮ, ಚಾಮುಂಡಿಯಂತಹ ಅನೇಕ ಮಹಿಳಾ ರಂಗ ಕಲಾವಿದರಿದ್ದಾರೆ. ಆದರೆ ಅವರ ನಂತರ ಸ್ತ್ರೀ ಕಲಾವಿದರನ್ನು ಕಾಣಲಾಗದೆ ಪ್ರಸ್ತುತ ಜಿಲ್ಲೆಯ ರಂಗಭೂಮಿ ಸ್ತ್ರೀ ಕಲಾವಿದರ ಕೊರತೆ ನೀಗಿಸುವಲ್ಲಿ ವಿಫಲವಾಗಿದೆ ಎಂದು ವೃತ್ತಿ ರಂಗಭೂಮಿ ಕಲಾವಿದೆ ಬಯಲಾಟ ಉಷಾರಾಣಿ ಅಭಿಪ್ರಾಯ ಪಟ್ಟರು. ಬೈರಗಾಮದಿನ್ನೆಯಲ್ಲಿ ಕಾರಂತ ರಂಗಲೋಕ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡ ರಂಗ ಪಲ್ಲಕ್ಕಿ -೨೦೧೮ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರತಿಯೊಬ್ಬ ಕಲಾವಿದನ ಬದುಕಿನ ಶೈಲಿ ಆಯಾ ಕಲೆಯ ಏಳ್ಗೆಯ ವ್ಯಾಪ್ತಿಯನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ಒಂದನ್ನೊಂದು ಕಾಲದಲ್ಲಿ ಕಲಾರಸಿಕರ ಮನತಣಿಸಿ ಮನೋರಂಜನೆಯ ರಸದೂಟ ಬಡಿಸಿದ ನನಗೆ ಇಂದು ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ.ಆದರೂ ನಾನು ರಂಗಭೂಮಿಯನ್ನು ಮೂದಲಿಸಿಲಿಲ್ಲ ಬದಲಾಗಿ ಎದೆಗವಚಿಕೊಂಡು ಪ್ರೀತಿ ಮಾಡಿದ್ದೇನೆ.ಕಲೆ ಯಾವುದೇ ಸಂದರ್ಭಗಳನ್ನಾಗಲಿ ಧೃತಿಗೆಡದೆ ಧೈರ್ಯದಿಂದ ಎದುರಿಸುವ ಮನೋಸ್ಥೈರ್ಯವನ್ನು ತುಂಬುತ್ತಿದೆ.ಅದೇ ನನ್ನನ್ನೂ ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂದರು.ನಂತರ ರಂಗಕರ್ಮಿ ಗುಬ್ಬಿಹಾಳ್ ಗೋಪಾಲರೆಡ್ಡಿ ಮಾತನಾಡಿ ಕಲೆಯು ಕೇವಲ ಹೆಸರು ತಂದುಕೊಡಬಹುದು ಆದರೆ ಹೊಟ್ಟೆ ಪೊರೆಯಲಾರದು ಎಂದು ಕೈಕಟ್ಟಿ ಕೂರುವುದರಲ್ಲಿ ಅರ್ಥವಿಲ್ಲ. ಮೇಲಾಗಿ ಕಲೆಯೆಂ...