Posts

Showing posts from February, 2024

ರಂಗಭೂಮಿ ನಿತ್ಯ ಘಟನೆಗಳಿಗೆ ಮುಖಾಮುಖಿಯಾಗುವ ಸಶಕ್ತ ಮಾಧ್ಯಮ . ಡಾ.ವಿಜಯಾ

ರಂಗಭೂಮಿ ನಿತ್ಯ ಘಟನೆಗಳಿಗೆ ಮುಖಾಮುಖಿಯಾಗುವ ಸಶಕ್ತ ಮಾಧ್ಯಮ . ಡಾ.ವಿಜಯಾ     ಬಳ್ಳಾರಿ , ಫೆ 24  ಅಭಿನಯ ಮನುಷ್ಯ ಕಂಡುಕೊಂಡ ಜೀವಂತ ಕಲೆ.   ರಂಗಭೂಮಿ ಸಮಾಜದ ನಿತ್ಯ ಘಟನೆಗಳಿಗೆ ಮುಖಾಮುಖಿಯಾಗುತ್ತಲೇ ವಿವೇಕವನ್ನು , ಮಾನವೀಯ ಮೌಲ್ಯಗಳನ್ನು ಕಟ್ಟಿ ಕೊಡುವಂತಹ ಸಶಕ್ತವಾದ ಮಾಧ್ಯಮ ಎಂದು ಬೆಂಗಳೂರಿನ ಹಿರಿಯ ನಾಟಕಕಾರ್ತಿಯಾದ ಡಾ.ವಿಜಯಾ ಸುಬ್ಬರಾಜು ನುಡಿದರು.        ನಗರದ ಸರಳಾದೇವಿ  ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನಲ್ಲಿ ಶನಿವಾರ ಕಾರಂತ ರಂಗಲೋಕ ಆಯೋಜಿಸಿದ್ದ ‘ ಕಾರಂತ ಸಾಹಿತ್ಯ ರತ್ನ -2023 ‘  ರಾಜ್ಯಮಟ್ಟದ ಪುಸ್ತಕ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.        ಈ ಹೊತ್ತು ಪ್ರೇಕ್ಷಕರ ಅಭಿರುಚಿ ಮನೋಭಾವಗಳು ಬದಲಾಗಿವೆ .ಕಲಾವಿದರಲ್ಲೂ ನಿಷ್ಠೆ ,ಕಲಾಪ್ರಜ್ಞೆ ಕಡಿಮೆಯಾಗಿದೆ ಎಂದು ವಿಷಾದಿಸಿದರು .ನಾನು ವಿದ್ಯಾರ್ಥಿ ಜೀವನದಲ್ಲಿ ಮೊಟ್ಟ ಮೊದಲಿಗೆ ಅಭಿನಯಕ್ಕಾಗಿ ಮುಖಕ್ಕೆ ಬಣ್ಣ ಹಚ್ಚಿಕೊಂಡಾಗ ಮನೆಯಲ್ಲಿ ಎಲ್ಲರೂ ಅಸಹಕಾರ ವ್ಯಕ್ತಪಡಿಸಿದರು. ನನ್ನಲ್ಲಿರುವ ರಂಗ ಪ್ರೀತಿ , ಮನೋಸ್ಥೈರ್ಯದಿಂದಾಗಿ ಹೆಚ್ಚು ನಾಟಕಗಳನ್ನು ಬರೆಯಲು ಮತ್ತು ಅಭಿನಯಿಸಲು ಸಾಧ್ಯವಾಯಿತು ಎಂದರು.       ಪ್ರಶಸ್ತಿ ಪುರಸ್ಕೃತ ನಾಟಕಕಾರ ಬೇಲೂರು ರಘುನಂದನ ಮಾತನಾಡಿ ಹೊಸ ತಲೆಮಾರು ಅಭಿನಯ ಮತ್ತು ಸಾಹಿತ್ಯದ ಕಡೆ ಹೆಚ್ಚು ಮುಖ ಮಾಡಿದಾಗ ಹೊಸ ಸಮಾಜ ನಿರ್ಮಾಣವಾಗಲು ಸಾಧ್ಯ. ಹೊಸಬರು ಈ ...