ರಂಗ ಮಾಲಿಕೆ - ೪೦ ಬಯಲಾಟದ ಕಲಾ ರಾಣಿ ' ಎಳ್ಳಾರ್ತಿ ಚಾಮುಂಡಿ'
ಬಣ್ಣದ ಬದುಕು ರಂಗ ಮಾಲಿಕೆ -೪೦ ಬಯಲಾಟದ ಕಲಾ ರಾಣಿ 'ಯಳ್ಳಾರ್ತಿ ಚಾಮುಂಡಿ' ಸಿರುಗುಪ್ಪ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಬಯಲಾಟದ ಚಾಮುಂಡಿ ಎಂದರೆ ಸಾಕು.ಅವರ ಬಗೆಗಿನ ಮಾತುಗಳನ್ನು ಅಕ್ಷರಶಃ ಹಿಡಿದಿಡಲು ಅಸಾಧ್ಯ.ಅವರ ಅಭಿನಯ ಚತುರತೆ,ನೃತ್ಯ ತಲ್ಲೀನತೆ ಅಷ್ಟರ ಮಟ್ಟಿಗೆ ಮೋಡಿ ಮಾಡಿದೆ.ಇಂತಹ ಅಭೂತಪೂರ್ವ ಅಭಿನಯದ ಅಭಿನೇತ್ರಿ ನಮ್ಮೊಡನೆ ಇದ್ದಾರೆಂದರೆ ನಮ್ಮ ಬಳ್ಳಾರಿಯ ಹೆಮ್ಮೆ ಎನ್ನಬಹುದಾಗಿದೆ. ಇವರು ೧೯೭೨ ರಲ್ಲಿ ಸಿರುಗುಪ್ಪ ತಾಲ್ಲೂಕಿನ ಉಪ್ಪಾರ ಹೊಸಳ್ಳಿಯ ಕಂಪನಿಯ ರಂಗ ಕಲಾವಿದರಾಗಿದ್ದ ವೀರಭದ್ರಯ್ಯ ಸ್ವಾಮಿ ಮತ್ತು ಬಸಮ್ಮರ ಮಗಳಾಗಿ ಮೈಸೂರು ಕ್ಯಾಂಪೊಂದರಲ್ಲಿ ಜನಿಸಿದರು. ಸಾಂಪ್ರದಾಯಿಕ ಶಿಕ್ಷಣ ಪಡೆಯಬೇಕಾದ ಬಾಲ್ಯದಲ್ಲೇ ಅಪ್ಪನ ಬಲವಂತಕ್ಕೆ ಮಣಿದು ನಾಟಕ ನೋಡಲು ಮತ್ತು ಉದ್ದೇಶಪೂರ್ವಕವಾಗಿ ನಾಟಕದ ಕಲೆಯನ್ನು ಅನುಕರೀಸುವ ಸಲುವಾಗಿ ಅಪ್ಪನ ಕಂಪನಿಯ ನಾಟಕಗಳಿಗೆ ಹೋಗುವ ಮೂಲಕ ರಂಗ ಶಿಕ್ಷಣ ಪಡೆದರು.ಹಾಗೆ ಹೋದಲೆಲ್ಲಾ ಕ್ರಮೇಣವಾಗಿ ಏಳೆಂಟನೇ ವಯಸ್ಸಿಗೆ ಚಿಕ್ಕ ಗೌನು ಹಾಕಿಕೊಂಡು ನೃತ್ಯ ಮಾಡಲು ಶುರು ಮಾಡಿದರು.ಅದಲ್ಲದೇ ೨೦೦/೩೦೦₹ ಮುಯ್ಯಿ ಪಟ್ಟಿ ಪಡೆಯಲು ಮುಂದಾದರು.ಅಂತೆಯೇ ಇತ್ತ ತಂದೆಗೆ, ತಮ್ಮ ಹೆಗಲಿಗೆ ಮಗಳು ಹೆಗಲಾದ ಖುಷಿಯಲ್ಲಿ ಸಂಭ್ರಮಿಸಿ ಹರಯಕ್ಕೆ ಬಂದಕೂಡಲೇ ಮಗಳಿಗೆ ನೃತ್ಯದಿಂದ ಅಭಿನಯಕ್ಕೆ ಬಡ್ತಿ ನೀಡಿದರು.ಅಲ್ಲದೆ ಅಷ್ಟೋತ್ತಿಗಾಗಲೇ ಇವರು ತಂದೆಯಿಂದಲೇ ಓದು ಬರಹ ಕಲಿತಿದ್ದರು. ನಂತರ ...