Posts

Showing posts from October, 2023

ಕಥೆಯೇ ಕಥೆಯಾದಾಗ..

Image
  ಮೂಲ ಕಥೆಯ ನಾಯಕಿ   ಸಾಂದರ್ಭಿಕ ಚಿತ್ರ         ಕಥೆಯೇ ಮತ್ತೊಂದು ಕಥೆಯಾದಾಗ...    ಇವತ್ತು ಸ್ವಲ್ಪ ಬೇಗನೇ ಲೈಬ್ರರಿ ಓದಿಗೆ ತಿಲಾಂಜಲಿ ಹೇಳಿ ಹೆಗಲಿಗೆ ಬ್ಯಾಗ್ ಹಾಕೊಂಡು ಹೊರಬಂದೆ. ಬರುವಾಗ ಏನೋ, ಇವತ್ತು ಹೋಗುವ ದಾರಿಯನ್ನು ಬದಲಾಯಿಸೋಣ ಎಂದೇನಿಸಿ ನವರಂಗದ ಕಡೆಯಿಂದ ಬರಲು ನಿರ್ಧರಿಸಿ ಹಾದಿ ಬದಲಿದೆ. ಕೊನೆಗೆ ಅಲ್ಲಿಗೂ ಬಂದು ನವರಂಗ ಮಂಟಪದ ಮೇಲೆ ಸಂಶೋಧನಾ ಬುದ್ಧಿ ತೋರಿಸಲು ಆರಂಭಿಸಿದೆ.     ಉಸಿರು ಗಟ್ಟುವ ಸ್ಥಳ, ಬಡ್ದಾಕಿದ್ರು ಕೇಳೋಕೆ ಅಲ್ಲಿ ಒಂದು ನರಪಿಳ್ಳೆನು ಇರಲಿಲ್ಲ. ಆದರೂ ಧೈರ್ಯ ಮಾಡಿಕೊಂಡು ತುಂಬಾ ಗಾಢವಾಗಿ, ತದೇಕ ಚಿತ್ತದಿಂದ ಅಲ್ಲಿನ ಕೆಳ ಮಂಟಪ ನೋಡಲೆಂದು ಅಲ್ಲಿನ ಎರಡು ಕೋಣೆಯ ತೆರದ ಕಿಟಿಕಿಯ ಅಂಚಿಗೆ ಕಣ್ಣಾರಳಿಸಿದೆ. ಅದೇನೋ ಇದ್ದಕ್ಕಿದ್ದಂತೆ ಹಕ್ಕಿ ಪಿಕ್ಕಿಗಳ ಧ್ವನಿಯ ನಡುವಿಂದ ಯಾರೋ ಗದರಿದ ಹಾಗೆ, ವಿಸಿಲ್ ಹೊಡೆದ ಹಾಗೆ ಭಾಸವಾಯಿತು. ಮನಸ್ಸು ಆ ಕ್ಷಣ ಜಲ್ಲೆಂದು ಅರೆಕ್ಷಣದಲ್ಲೇ ಬಲಗೈ ತಾನಾಗಿಯೇ ಉಗಳಚ್ಚಿಕೊಂಡು ಬೆನ್ನು ಮುಟ್ಟಿ ಧೈರ್ಯ ಹೇಳಿತು. ಆದರೂ ಮತ್ತದೇ ಗತ್ತಲ್ಲಿ ಕೆಳಗಿನಿಂದ ಮೇಲಿನ ವೇದಿಕೆಗೆ ಬಂದು ಅತ್ತ ಇತ್ತ ಕತ್ತಾಡಿಸಿದೆ.               ಅಚ್ಚರಿಯಂಬಂತೆ ನನ್ನ ಕಣ್ಣೆದುರೆ ಒಂದು ಮುಗ್ಧ ಮೊಗದ ಅಂದದ ಚಲುವೆ,ಕೆದರಿದ ಕೂದಲು, ಹಳೆಯ ಜೀನ್ಸ್ ಪ್ಯಾಂಟ್, ಹಳೆಯದಾದ ತುಂಬು...

ಸಿರಿನಾಡಿನ ಹುಡುಗಿಗೆ ಕಂಚಿನ ಉಡುಗೆ ( ನಂದಿನಿ ಅಗಸರ)

Image
 ಸಿರಿನಾಡಿನ ಹುಡುಗಿಗೆ ಕಂಚಿನ ಉಡುಗೆ ಪ್ರತಿಯೊಬ್ಬ ಸಾಧಕರು ನೆನಪಿಡಬೇಕಾದ ಮೂರು ಅಂಶಗಳೆಂದರೆ 'ಮೊದಲು ಅವಮಾನ, ನಂತರ ಅನುಮಾನ ತದನಂತರವೇ ಸನ್ಮಾನ '  ಇವುಗಳನ್ನು ಮನದಲ್ಲಿಟ್ಟುಕೊಂಡು ಮುಂದುವರೆದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ನಿದರ್ಶನವೆಂದರೆ ಇತ್ತೀಚೆಗೆ ಚೀನಾದ ಹಾಂಗ್ ಝೌ ನಲ್ಲಿ ನಡೆದ ಏಷ್ಯಾನ್ ಗೇಮ್ಸ್ ನಲ್ಲಿ ೮೦೦ ಮೀ ಹೆಪ್ಟಾಥ್ಲಾನ್ ನಲ್ಲಿ ಕಂಚಿನ ಪದಕ ಪಡೆದ ಆಟಗಾರ್ತಿ ಬಳ್ಳಾರಿಯ ಹೆಮ್ಮೆಯ ಪುತ್ರಿ ನಂದಿನ ಅಗಸರ.     ಇವರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಸಮೀಪದ ಶ್ರೀನಗರ ಕ್ಯಾಂಪ್ ಎಂಬ ಪುಟ್ಟ ಗ್ರಾಮದಲ್ಲಿ ತಂದೆ  ಯಲ್ಲಪ್ಪ ತಾಯಿ ಅಯ್ಯಮ್ಮರ ಮೊದಲ ಮಗಳಾಗಿ ೭ನೇ ಆಗಸ್ಟ್ ೨೦೦೩ ರಲ್ಲಿ ಜನಿಸಿದರು.      ಕಡು ಬಡತನದಲ್ಲಿ ಹುಟ್ಟಿದ ನಂದಿನಿ ಬಾಲ್ಯದ ದಿನಗಳಲ್ಲಿ ತೀವ್ರತರವಾದ ಸಂಕಷ್ಟಗಳನ್ನು ಅನುಭವಿಸಿದ್ದಾರೆ. ತನ್ನ ತಂದೆಯು ಮಾಡಿದ ಸಾಲವನ್ನು ತೀರಿಸಲಾಗದೇ ಹೊಟ್ಟೆಪಾಡಿಗೆಗಾಗಿ ಹೈದ್ರಾಬಾದ್ ಗೆ ದುಡಿಯಲು ೩ ತಿಂಗಳ ನಂದಿನಿಯನ್ನು ಕರೆದುಕೊಂಡು ಇಡೀ ಕುಟುಂಬ ವಲಸೆ ಬರುತ್ತದೆ. ಆರಂಭದಲ್ಲಿ ತಂದೆ ಯಲ್ಲಪ್ಪ ಅಪಾರ್ಟ್ಮೆಂಟ್ ಒಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸುಮಾರು ವರ್ಷಗಳ ಕಾಲ ಕೆಲಸ ಮಾಡುತ್ತಾರೆ. ಆಗ ಅಲ್ಲಿನ ಸಹೃದಯರ ಒಲುಮೆಯಿಂದಾಗಿ ಅಂಗಳದಲ್ಲಿ ಆಟವಾಡುತ್ತಿದ್ದ ೭ ವರ್ಷದ ನಂದಿನಿಯವರನ್ನು ಕರೆದುಕೊಂಡು ಹೋಗಿ  ಸೈನಿಕ (ಕೆ...