ರಂಗ ಮಾಲಿಕೆ - ೪೭ ಕರ್ನಾಟಕಾಂಧ್ರದ ಅಭಿನಯ ಚತುರೆ 'ಉಳೇಬೀಡು ರಂಗಮ್ಮ'
ಬಣ್ಣದ ಬದುಕು ರಂಗ ಮಾಲಿಕೆ - ೪೭ ಕರ್ನಾಟಕಾಂಧ್ರದ ಅಭಿನಯ ಚತುರೆ 'ಉಳೇಬೀಡು ರಂಗಮ್ಮ'. ಒಂದು ಕಾಡಿನ ಕಲ್ಲನ್ನು ಶಿಲ್ಪವಾಗಿಸಿದ ನಂತರ ಅದರ ರೂವಾರಿ ಕಣ್ಮರೆಯಾಗುತ್ತಾನೆ ಅಥವಾ ಶಿಲ್ಪದ ಮೆರಗಿನಲ್ಲಿ ಮರೆಯಾಗುತ್ತಾನೆ. ಅಂತೆಯೇ ಬಳ್ಳಾರಿ ರಂಗಭೂಮಿಯಲ್ಲಿ ಪ್ರಸ್ತುತ ದೃವತಾರೆಯಾಗಿ ಹೊಳೆಯುತ್ತಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದೆ ಆದೋನಿ ವೀಣಾರ ರಂಗಕಲೆಯ ಹಿಂದಿನ ಶಿಲ್ಪಿಯೇ ಅವರ ತಾಯಿ ಉಳೇಬೀಡು ರಂಗಮ್ಮ. ಉಳೇಬೀಡು ರಂಗಮ್ಮನವರು ಆದೋನಿಯ ನೇಮಕಲ್ ಲ್ಲಿ ನೇಮಕಲ್ ರಂಗಯ್ಯ ಮತ್ತು ಶೇಷಮ್ಮರ ಮಗಳಾಗಿ ಕ್ರಿ.ಶ.೧೯೩೬ರಲ್ಲಿ ಜನಿಸಿದರು.ಇವರ ತಂದೆ ಬೈರವಿ ರಾಗವನ್ನು ಗಂಟೆಗಟ್ಟಲೆ ಹಾರ್ಮೋನಿಯಂ ಮೂಲಕ ನುಡಿಸಿ 'ಭೈರವಿ ರಂಗಪ್ಪ' ಎಂದು ಪ್ರಸಿದ್ಧರಾಗಿದ್ದರು. ಅಲ್ಲದೆ ಇವರ ಅಕ್ಕ ಮಂಗಮ್ಮ ಸಹ ಪ್ರಸಿದ್ಧ ರಂಗನಟಿಯಾಗಿದ್ದರು. ಕಲೆ ರಕ್ಇತಗತವಾಗಿದ್ದರಿಂದ ಇವರು ಸಹ ತಮ್ಮ ೫ನೇ ವಯಸ್ಸಿಗೆ ತಂದೆಯ ನೇತೃತ್ವದಲ್ಲಿ 'ಲವಕುಶ' ಎಂಬ ನಾಟಕಕ್ಕೆ ಬಣ್ಣ ಹಚ್ಚಿದರು. ಇದರ ಯಶಸ್ಸಿನ ಬೆನ್ನಲ್ಲೇ ನಟಿ ಅದವಾನಿ ಲಕ್ಷಮ್ಮಮ್ಮರ ಪತಿ, ಖ್ಯಾತ ನಟ ೨೫ ಪ್ರಾಯದವರಾಗಿದ್ದ ರಘುರಾಮಯ್ಯರೊಂದಿಗೆ ಕೇವಲ ೧೦ ವಯಸ್ಸಿನ ರಂಗಮ್ಮ ರುಕ್ಮಿಣಿಯಾಗಿ ಗರುಡ ಗರ್ವವಂಗ ನಾಟಕದಲ್ಲಿ ಅಮೋಘವಾಗಿ ಅಭಿನಯ ನೀಡಿದ್ದರು.ಇದಕ್ಕಾಗಿ ರಘುರಾಮಯ್ಯನವರು ಸಿನಿಮಾಗೆ ಕರೆದೊಯ್ಯವುದಾಗಿ ರಂಗಯ್ಯರಲ್ಲಿ ವಿನಂತಿಸಿದ್ದರು.ಆದರೆ ಮಗಳನ್ನು ಕೇವಲ ರಂಗನಟಿ...