ರಂಗ ಮಾಲಿಕೆ - ೨೬ ಸಾತ್ವಿಕ ಗುಣದ ರಂಗ ಸಂಪನ್ನರು ' ಕುಂಟನಾಳ್ ಸಿದ್ಧನಗೌಡರು'
ಬಣ್ಣದ ಬದುಕು ರಂಗ ಮಾಲಿಕೆ - ೨೬ ಸಾತ್ವಿಕ ಗುಣದ ರಂಗ ಸಂಪನ್ನ "ಕುಂಟನಹಾಳ್ ಸಿದ್ಧನಗೌಡರು." ಬಳ್ಳಾರಿಯ ಸಮೃದ್ಧ ತಾಲ್ಲೂಕು ಎಂದರೆ ಸಿರುಗುಪ್ಪ.ಇಲ್ಲಿ ಹೇರಳ ನೀರಿನ ಸೆಲೆಯಿದೆ, ಹಳೆ ತಲೆಮಾರಿನ ರಂಗ ಸಂಪನ್ನರಿದ್ದಾರೆ,ಪ್ರಾಚೀನ ಐತಿಹಾಸಿಕ ನಲೆಗಳ,ದೇಗುಲಗಳ ಬಿತ್ತಿಯಿದೆ, ಹಲವು ಪ್ರಥಮಗಳ ಸೃಷ್ಟಿಯಿದೆ.ಇಂತಹ ನಾಡಿಗೆ ಅಂಟಿಕೊಂಡಿರುವ ಕರ್ನಾಟಕಾಂಧ್ರ ಪ್ರದೇಶದ ಅಪ್ಪಟ ಗ್ರಾಮೀಣ ಭಾಗದ ಸಾತ್ವಿಕ ಗುಣದ ರಂಗ ಸಂಪನ್ನರೇ ' ಕುಂಟನಹಾಳ್ ಸಿದ್ಧನಗೌಡರು' ಇವರ ಬಣ್ಣದ ಬದುಕಿನ ನೈಜ ದರ್ಶನವೇ ನನ್ನೀ ಲೇಖನ. ಇವರು ಕ್ರಿ.ಶ.೧೯೨೦ರ ಆಸುಪಾಸಿನಲ್ಲಿ ಚನ್ನನಗೌಡ ಮತ್ತು ಗೌರಮ್ಮ ಎಂಬ ದಂಪತಿಗಳ ಮಗನಾಗಿ ಈಗಿನ ಆದೋನಿ ತಾಲ್ಲೂಕಿನ ಕುಂಟನಹಾಳ್ ಗ್ರಾಮದಲ್ಲಿ ಜನಿಸಿದರು. ಇವರು ಮೂಲ ನಕ್ಷತ್ರದಲ್ಲಿ ಜನಿಸಿದ್ದರಿಂದಲೇ ಹುಟ್ಟಿದ ಮರುದಿನವೇ ತಾಯಿಯನ್ನು , ಕೆಲ ವರ್ಷದ ನಂತರ ಇದ್ದ ೭೦೦ ಎಕರೆ ಜಮೀನಿನಲ್ಲಿ ೪೦೦ ಎಕರೆ ಭೂಮಿ ಕಳೆದುಕೊಂಡರು. ಇದರ ವ್ಯಥೆಯಲ್ಲಿ ತಂದೆಯನ್ನು ಸಹ ಕಳೆದುಕೊಂಡರು. ನಂತರ ತಮ್ಮ ಎಳೆಯ ವಯಸ್ಸಿನಲ್ಲಿ ತಮ್ಮ ಚಿಕ್ಕಪ್ಪ ಬಂಡ್ರಾಳ್ ಪಂಪನಗೌಡರ ಮನೆಯಲ್ಲಿಯೇ ಬೆಳೆದು ಅದೇ ಊರಿನಲ್ಲಿ 3 ನೇ ತರಗತಿಯವರೆಗೆ ಓದಿ, ನಂತರ ಡಂಕನಕಲ್ಲು ಗವಾಯಿ ಸಂಗಣ್ಣನವರ ಬಳಿಯಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದರು. ಅಲ್ಲಿ ಸಂಗೀತ,ರಂಗಕಲೆ,ನೃತ್ಯವಿದ್ಯೆ ಕಲಿತು ಊರಿಗೆ ಬಂದರು.ಅದೇ ಸಮಯಕ್ಕೆ ಬಂಡ್ರಾಳಿಗೆ ಕಂಪನಿಯು ಬಂದಿತ್ತು.ಸಕಲ ಕಲಾಸಕ್ತರಾ...