Posts

Showing posts from May, 2022

ರಂಗ ಮಾಲಿಕೆ -೬೧ ಕಲಾ ಚತುರ "ಹಂದ್ಯಾಳ್ ಪುರುಷೋತ್ತಮ"

Image
  ಬಣ್ಣದ ಬದುಕು ರಂಗ ಮಾಲಿಕೆ -೬೧ ಕಲಾ ಚತುರ "ಹಂದ್ಯಾಳ್ ಪುರುಷೋತ್ತಮ"     ಇವರು ಬಳ್ಳಾರಿ ತಾಲ್ಲೂಕಿನ ಹಂದ್ಯಾಳು ಗ್ರಾಮದ ಜಿ.ಹನುಮಂತಪ್ಪ ಮತ್ತು ಲಕ್ಷ್ಮೀದೇವಿಯವರ ಮಗನಾಗಿ ೦೧.೦೬.೧೯೬೬ ರಲ್ಲಿ ಜನಿಸಿದರು. ಇವರು ವೃತ್ತಿಯಲ್ಲಿ ಛಾಯಾಗ್ರಾಹಕರು ಪ್ರವೃತ್ತಿಯಲ್ಲಿ ರಂಗಭೂಮಿ ಕಲಾವಿದರು ಸುಮಾರು 23 ವರ್ಷಗಳ ಕಾಲ ವೃತ್ತಿ ಕಂಪನಿಗಳಲ್ಲಿ ಅಭಿನಯಿಸುವ ಮೂಲಕ ನಟನೆಗೆ ಮಹತ್ವ ತಂದುಕೊಟ್ಟರು. ಇದು ಗ್ರಾಮೀಣ ಪ್ರತಿಭೆಗೆ ಸಿಕ್ಕ ಮನ್ನಣೆ ಎಂದರೆ ತಪ್ಪಾಗಲಾರದು. ಇವರು ತಮ್ಮ ಶಿಕ್ಷಣವನ್ನು ಹಂದ್ಯಾಳ್ ಕೊರ್ಲಗುಂದಿ ಬಳ್ಳಾರಿಯಲ್ಲಿ ಮುಗಿಸಿದರು. ತಮ್ಮ ಬಾಲ್ಯದ ಶಾಲಾ ದಿನಗಳಲ್ಲಿ ರಂಗದೊಲವುಗೆ ಸೆರೆಯಾದರು.ಆ ಮೂಲಕ ಗ್ರಾಮದ ಜಾತ್ರೆ ಉತ್ಸವಗಳಲ್ಲಿ ತಮ್ಮ ಅಭಿನಯದ ಚಾಕಚಕ್ಯತೆಯನ್ನು ತೋರ್ಪಡಿಸಿದರು. ತಮ್ಮ ತಂದೆಯ ಪೂರ್ಣಪ್ರಮಾಣದ ಪ್ರೇರಣೆಯೇ ರಂಗಭೂಮಿಗೆ ಧುಮುಕುವಂತೆ ಮಾಡಿತು.      ಇಡೀ ಬಳ್ಳಾರಿ ಜಿಲ್ಲೆ ಸಾಂಸ್ಕೃತಿಕವಾಗಿ ಸಮೃದ್ಧವಾದ ನಾಡು ಅಂತೆಯೇ ಇಲ್ಲಿ ಜಾನಪದ ಹವ್ಯಾಸಿ ಹೀಗೆ ನಾನಾ ವಿಧವಾಗಿ ಸಾಂಸ್ಕೃತಿಕ ವಾತಾವರಣ ಹಚ್ಚಹಸಿರಾಗಿದೆ ಈ ಮೂಲಕ ಶ್ರೀಯುತರ ಹುಟ್ಟೂರಿನಲ್ಲಿ ಬಾಲ್ಯ ಕಲಿಯುವಾಗ ಊರಿನಲ್ಲಿ ಕಾಣಸಿಗುತ್ತಿದ್ದ ನಾಡೋಜ ಬುರ್ರಕಥಾ ಈರಮ್ಮನವರ ಅಭಿನಯ ಪೂರಿತ ಮತ್ತು ವಾಚೀಕ ಸಂಪನ್ನವಾದ ಕಥೆಗಳು, ಬಯಲಾಟದ ಜಂಬಣ್ಣನವರ ಹಾಸ್ಯ ಸದೃಶ್ಯ ದೃಶ್ಯಾವಳಿಗಳು,ಗದ್ಯ ಪದ್ಯ ಮಿಶ್ರಿತ ಪುರಾಣ ಪ...

ರಂಗ ಮಾಲಿಕೆ - ೬೪ ನೇಪಥ್ಯಕ್ಕೆ ಸರಿದ ಬಣ್ಣದ ಮೋಡಿಗಾರ 'ಎಂ.ಮುತ್ಯಾಲ ಶ್ರೀರಾಮುಲು'.

Image
ಬಣ್ಣದ ಬದುಕು ರಂಗ ಮಾಲಿಕೆ - ೬೪ ನೇಪಥ್ಯಕ್ಕೆ ಸರಿದ ಬಣ್ಣದ ಮೋಡಿಗಾರ 'ಎಂ.ಮುತ್ಯಾಲ ಶ್ರೀರಾಮುಲು'.       ನಾಟಕ ಎಂದ ಕೂಡಲೇ ಅಲ್ಲಿ ನಟ,ನಟಯರಲ್ಲದೇ, ನೇಪಥ್ಯದಲ್ಲಿದ್ದಕೊಂಡು ತಮ್ಮ ಭಾವಲಹರಿಯನ್ನು ಅಭಿನೇತೃಗಳ ಮೂಲಕವೇ ಅಭಿವ್ಯಕ್ತಿ ಪಡಿಸುವ ವ್ಯಕ್ತಿಗಳಲ್ಲಿ  'ಪ್ರಸಾಧನಕಾರ ಅಥವಾ ಮೇಕಪ್ ಮ್ಯಾನ್' ಒಬ್ಬರು. ಈಗಿನ ಜಮಾನದಲ್ಲಿ ನಿಜವಾಗಿಯೂ ನಾಟಕವೊಂದಕ್ಕೆ ರಂಗು ಬರುವುದೇ ನೇಪಥ್ಯಗಾರರಿಂದ.ಅದರಲ್ಲೂ ಪ್ರಸಾಧನಕಾರ ತನ್ನ ಕುಂಚದಿಂದ ಅಭಿನೇತ್ರಿಯ ಪಾತ್ರಕ್ಕೆ ಜೀವತುಂಬುತ್ತಾನೆ. ಅವರು ನಾಟಕದ ಕಥಾವಸ್ತುವಿಗೆ ಬಣ್ಣ ತುಂಬುತ್ತಾರೆ. ೮೦ ರ ದಶಕದಲ್ಲಿ ಬಳ್ಳಾರಿಯ ರಂಗಭೂಮಿ ಇತಿಹಾಸದಲ್ಲಿ  ಉತ್ತುಂಗದ ಪ್ರಸಿದ್ಧತೆಯನ್ನು ಗಳಿಸಿದ ಒಬ್ಬ ಶ್ರೇಷ್ಠ ಪ್ರಸಾಧನಕಾರ ಇಂದು ನಮ್ಮ ನಿಮ್ಮೊಡನೆ ಇದ್ದು ಇಲ್ಲದಂತಾಗಿದ್ದಾನೆ.ಆ ವ್ಯಕ್ತಿಯೇ ಬಳ್ಳಾರಿಯ 'ಎಂ.ಮುತ್ಯಾಲ ಶ್ರೀರಾಮುಲು'.     ಸಣ್ಣದಾದ  ಸಣಕಲು ದೇಹ, ಆ ದೇಹಕ್ಕೆ ಅಷ್ಟೇನು ವರ್ಚಸ್ಸಲ್ಲದ ಉಡುಪು, ಒಡೆದ ಸೋಡಾಗ್ಲಾಸು, ಕೈಲೊಂದು ಮೋಟು ಬೀಡಿ ಮತ್ತು ಬಾಯಲ್ಲಿ ಗುಟ್ಕಾ ಜಗಿಯುತ್ತಾ ಆಗಾಗ ಬಳ್ಳಾರಿ ಹೃದಯ ಭಾಗದ ರಾಘವ ಕಲಾ ಮಂದಿರದಲ್ಲಿ ಕಾಣಸಿಗುವ ಈ ಗುರುತಿರುವ ವ್ಯಕ್ತಿಯೇ ಎಂ.ಶ್ರೀರಾಮುಲು. ನಿಜಕ್ಕೂ ಬಹಿರಂಗದಲ್ಲಿ ಸರಳ ಸಜ್ಜನಿಕೆಯ ತೀರಾ ಬಡವರಾದರೂ, ಅಂತರಂಗದಲ್ಲಿ ಎಲ್ಲರನ್ನೂ ಅತಿಯಾಗಿ ಪ್ರೀತಿಸುವ ಹೃದಯವಂತಿಕೆಯ ಶ್ರೀಮಂತರೆನಿಸಿದ್ದಾರೆ. ಇವರು ಸ...

ರಂಗ ಮಾಲಿಕೆ -೬೩ ಕನ್ನಡ ಚಲನಚಿತ್ರರಂಗದ ಗಡಿನಾಡಿನ ರಂಗತಾರೆ 'ಬಳ್ಳಾರಿ ರತ್ನಮಾಲಾ'.

Image
 ಬಣ್ಣದ ಬದುಕು ರಂಗ ಮಾಲಿಕೆ -೬೩  ಕನ್ನಡ ಚಲನಚಿತ್ರರಂಗದ ಗಡಿನಾಡಿನ ರಂಗತಾರೆ 'ಬಳ್ಳಾರಿ ರತ್ನಮಾಲಾ'.      ಭಾರತೀಯ ಚಲನಚಿತ್ರರಂಗದಲ್ಲಿ ಇಂದು ಸ್ಯಾಂಟಲ್ ವುಡ್ ನದ್ದೇ ಅರ್ಭಟ. ಬಾಕ್ಸ್ ಆಫೀಸ್ ನ ಎಲ್ಲಾ ದಾಖಲೆಗಳನ್ನು ಮುರಿದು ಕಟ್ಟುವಷ್ಟರ ಮಟ್ಟಿಗೆ ಬೆಳೆಯುತ್ತಿದೆ.ಅದರ ನಿದರ್ಶನಗಳು ಈಗ ನಮ್ಮ ಕಣ್ಮುಂದೆ ಇರೋ ಕೆ.ಜಿ.ಎಫ್ ನಂತಹ ಅನೇಕ ಸಿನಿಮಾಗಳು. ಆದರೆ ಇಷ್ಟೇಲ್ಲಾ ವೈಭವಪೇತವಾಗಿ ಮೆರೆಯುತ್ತಿರುವ ಸ್ಯಾಂಡಲ್ ವುಡ್ ನೋಣ ಹೊಡೆಯುತ್ತ, ರೋಗಿಯಂತೆ ತೆವಳುತ್ತಾ ಇತ್ತು. ಹಾಗಾದರೆ ಮತ್ತೆ ಪುನಶ್ಚೇತನ ದೊರೆತಿದ್ದು ಯಾವಾಗ? ಆ ಯಶಸ್ಸಿನ ಧೃವತಾರೆಗಳು ಯಾರ್ಯಾರು ? ಅಂತಾ ನೋಡಿದಾಗ ಕಾಣುವ ಹಲವು ಚೇತನಮಣಿಗಳಲ್ಲಿ ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುವಂತೆ ಮಾಡಿದ ಹೆಸರೇ ' ಬಳ್ಳಾರಿ ವನಮಾಲಾ'.     ಇವರು ೦೩ನೇ ಮಾರ್ಚ್ ೧೯೨೮ ರಂದು ಬಳ್ಳಾರಿಯ ಪ್ರಸಿದ್ಧ ಪಿಟೀಲು ವಿದ್ವಾಂಸರಾಗಿದ್ದ ತಿಮ್ಮಪ್ಪ ಹಾಗೂ ವೀರಮ್ಮರ ೬ನೇ ಮಗಳಾಗಿ ಜನಿಸಿದರು. ರತ್ನಮಾಲಾರು ನಿಜಕ್ಕೂ ಸುಂದರ ಹೂಗಳಿಂದ ಕಟ್ಟಿದ ಹೂ ಮಾಲೆಯಷ್ಟೇ ಸೌಂದರ್ಯವತಿ ಮತ್ತು ಸ್ಪೂರದ್ರೂಪಿಯಾಗಿದ್ದರು.ನೋಡಿದಾಕ್ಷಣ ಎಂತಹ ರಸಿಕನಾದರೂ ಮನಸೋತು ಶರಣಾಗತಿಯಾಗಿಸುವಷ್ಟು ಚೆಲುವು ಅವರಲ್ಲಿ ಅಡಗಿತ್ತು. ಅಲ್ಲದೇ ಮೂಲತಃ ಕಲೆಯನ್ನಾಶ್ರಯಿಸಿದ ಕುಟುಂಬದಲ್ಲಿ ಬೆಳೆದಿದ್ದರಿಂದ ಕಲೆಯನ್ನು ಒಲಿಸಿಕೊಳ್ಳಲು  ತಡವಾಗಲಿಲ್ಲ. ಬಾಲ್ಯದಿಂದಲೂ ತಮ್ಮ ಸಹೋದರಿಯಾದ ...