ರಂಗ ಮಾಲಿಕೆ -೬೧ ಕಲಾ ಚತುರ "ಹಂದ್ಯಾಳ್ ಪುರುಷೋತ್ತಮ"
ಬಣ್ಣದ ಬದುಕು ರಂಗ ಮಾಲಿಕೆ -೬೧ ಕಲಾ ಚತುರ "ಹಂದ್ಯಾಳ್ ಪುರುಷೋತ್ತಮ" ಇವರು ಬಳ್ಳಾರಿ ತಾಲ್ಲೂಕಿನ ಹಂದ್ಯಾಳು ಗ್ರಾಮದ ಜಿ.ಹನುಮಂತಪ್ಪ ಮತ್ತು ಲಕ್ಷ್ಮೀದೇವಿಯವರ ಮಗನಾಗಿ ೦೧.೦೬.೧೯೬೬ ರಲ್ಲಿ ಜನಿಸಿದರು. ಇವರು ವೃತ್ತಿಯಲ್ಲಿ ಛಾಯಾಗ್ರಾಹಕರು ಪ್ರವೃತ್ತಿಯಲ್ಲಿ ರಂಗಭೂಮಿ ಕಲಾವಿದರು ಸುಮಾರು 23 ವರ್ಷಗಳ ಕಾಲ ವೃತ್ತಿ ಕಂಪನಿಗಳಲ್ಲಿ ಅಭಿನಯಿಸುವ ಮೂಲಕ ನಟನೆಗೆ ಮಹತ್ವ ತಂದುಕೊಟ್ಟರು. ಇದು ಗ್ರಾಮೀಣ ಪ್ರತಿಭೆಗೆ ಸಿಕ್ಕ ಮನ್ನಣೆ ಎಂದರೆ ತಪ್ಪಾಗಲಾರದು. ಇವರು ತಮ್ಮ ಶಿಕ್ಷಣವನ್ನು ಹಂದ್ಯಾಳ್ ಕೊರ್ಲಗುಂದಿ ಬಳ್ಳಾರಿಯಲ್ಲಿ ಮುಗಿಸಿದರು. ತಮ್ಮ ಬಾಲ್ಯದ ಶಾಲಾ ದಿನಗಳಲ್ಲಿ ರಂಗದೊಲವುಗೆ ಸೆರೆಯಾದರು.ಆ ಮೂಲಕ ಗ್ರಾಮದ ಜಾತ್ರೆ ಉತ್ಸವಗಳಲ್ಲಿ ತಮ್ಮ ಅಭಿನಯದ ಚಾಕಚಕ್ಯತೆಯನ್ನು ತೋರ್ಪಡಿಸಿದರು. ತಮ್ಮ ತಂದೆಯ ಪೂರ್ಣಪ್ರಮಾಣದ ಪ್ರೇರಣೆಯೇ ರಂಗಭೂಮಿಗೆ ಧುಮುಕುವಂತೆ ಮಾಡಿತು. ಇಡೀ ಬಳ್ಳಾರಿ ಜಿಲ್ಲೆ ಸಾಂಸ್ಕೃತಿಕವಾಗಿ ಸಮೃದ್ಧವಾದ ನಾಡು ಅಂತೆಯೇ ಇಲ್ಲಿ ಜಾನಪದ ಹವ್ಯಾಸಿ ಹೀಗೆ ನಾನಾ ವಿಧವಾಗಿ ಸಾಂಸ್ಕೃತಿಕ ವಾತಾವರಣ ಹಚ್ಚಹಸಿರಾಗಿದೆ ಈ ಮೂಲಕ ಶ್ರೀಯುತರ ಹುಟ್ಟೂರಿನಲ್ಲಿ ಬಾಲ್ಯ ಕಲಿಯುವಾಗ ಊರಿನಲ್ಲಿ ಕಾಣಸಿಗುತ್ತಿದ್ದ ನಾಡೋಜ ಬುರ್ರಕಥಾ ಈರಮ್ಮನವರ ಅಭಿನಯ ಪೂರಿತ ಮತ್ತು ವಾಚೀಕ ಸಂಪನ್ನವಾದ ಕಥೆಗಳು, ಬಯಲಾಟದ ಜಂಬಣ್ಣನವರ ಹಾಸ್ಯ ಸದೃಶ್ಯ ದೃಶ್ಯಾವಳಿಗಳು,ಗದ್ಯ ಪದ್ಯ ಮಿಶ್ರಿತ ಪುರಾಣ ಪ...