ರಂಗ ಮಾಲಿಕೆ - ೪೩ ಎಮ್ಮಿಗನೂರು ಹೇಮರೆಡ್ಡಿ
ಬಣ್ಣದ ಬದುಕು ರಂಗ ಮಾಲಿಕೆ -೩೪ ಬಯಲಾಟದ ಮುಮ್ಮೇಳಗಾರ "ಕೊತ್ತಲಚಿಂತ ಹೇಮರೆಡ್ಡಿ" ಪ್ರಾಚೀನ ಕಾಲದಿಂದಲೂ ಬಹುತೇಕ ಹಳ್ಳಿಗಳಲ್ಲಿ ಯಾರಾದರೂ ನಾಟಕಗಳಲ್ಲಿ ,ಅದರಲ್ಲೂ ಬಯಲಾಟಗಳಲ್ಲಿ ಅಭಿನಯಿಸಿದರೆ ಅದನ್ನು ಆ ಅಭಿನೇತೃಗಳ ವರ್ಚಸ್ಸು, ಶ್ರೇಯಸ್ಸು ಎಂದು ಭಾವಿಸಿದ ಕಾಲ ನಮ್ಮ ಕಾಲಮಾನದೊಂದಿಗೆ ಬೆಸೆದು ಕೊಂಡಿದೆ.ಅಂತೆಯೇ ಇಂದಿಗೂ ಪ್ರತಿಹಳ್ಳಿಗಳಲ್ಲಿ ಗ್ರಾಮೋದ್ಧಾರಕ್ಕಾಗಿ,ಕುಟುಂಬದ ಶ್ರೇಯಸ್ಸಿಗೆ, ವೈಯಕ್ತಿಕ ಪ್ರತಿಷ್ಠೆಗೆ ನಾಟಕಗಳನ್ನು ಮಾಡುವುದನ್ನು ಕಾಣಬಹುದು.ಅದರಲ್ಲೂ ಬಹುತೇಕರು ಉದರ ಪೋಷಣೆಗೂ ನಾಟಕಗಳಲ್ಲಿ ಅಭಿನಯಿಸುವುದಕ್ಕೆ ಮುಂದಾಗಿದ್ದಾರೆ. ಆದರೆ ಕೌಟುಂಬಿಕ ಹಿನ್ನೆಲೆಯಲ್ಲಿ ಧನವಂತರಾಗಿದ್ದರು ಊರಿನ ಆಸಕ್ತರೊಡನೆ ಸೇರಿ ಸ್ವಂತ ಖರ್ಚಿನಲ್ಲಿ ಗ್ರಾಮೋದ್ಧಾರಕ್ಕಾಗಿ ನಾಟಕಗಳನ್ನು ಮಾಡಿ ಹೆಸರಾದ ಕೆಲವರಲ್ಲಿ ಒರ್ವರು ಎಮ್ಮಿಗನೂರಿನ ಕೊತ್ತಲಚಿಂತ ಹೇಮರೆಡ್ಡಿ. ಇವರು ಕಂಪ್ಲಿ ತಾಲೂಕಿನ ಎಮ್ಮಿಗನೂರಿನ ಗಿರಿರೆಡ್ಡಿ ಮತ್ತು ಜಡಿಯಮ್ಮ ಎಂಬ ದಂಪತಿಗಳ ಮಗನಾಗಿ ಕ್ರಿ.ಶ.೦೧.೦೬.೧೯೫೫ ರಲ್ಲಿ ಜನಿಸಿದರು.ಹುಟ್ಟೂರಿನಲ್ಲೇ ೯ ನೇತರಗತಿಯ ಓದಿ ನಂತರ ಅರ್ಧಕ್ಕೆ ನಿಲ್ಲಿಸಿದರು. ಕೌಟುಂಬಿಕವಾಗಿ ಉಳ್ಳವರಾಗಿದ್ದರಿಂದ ಇವರ ತಂದೆ ಊರಿನ ಸರಿಕರೊಡನೆ ಸೇರಿ ವರ್ಷಕ್ಕೆ ಎರಡು ಬಾರಿ ನಡೆಯುವ ಜಾತ್ರೆ ಪ್ರಯುಕ್ತ ಗಿರಿಜಾ ಕಲ್ಯಾಣ ಬಯಲಾಟವಾಡಲು ಮುಂದಾದರು.ಅಲ್ಲದೇ...