Posts

Showing posts from May, 2021

ರಂಗ ಮಾಲಿಕೆ - 23 ಸಂಡೂರಿನ ರಂಗ ಮಯೂರಿ ' ರೇಣುಕಾ ಬಾವಳ್ಳಿ'

Image
  ಬಣ್ಣದ ಬದುಕು ರಂಗ ಮಾಲಿಕೆ-23 ಸಂಡೂರಿನ ರಂಗ ಮಯೂರಿ ' ರೇಣುಕಾ ಬಾವಳ್ಳಿ'. ಕಣ್ಮುಂದೆ ಕಾಣುವ ಕಲೆ ನಿಜವಿರಬಹುದು ಆದರೆ ಅದರ ಹಿಂದಣ ಬದುಕು ಕಣ್ಣಗೆ ಕಂಡಷ್ಟು ಸತ್ಯವಲ್ಲ.ಒಂದು ನಾಟಕ ರಂಗಕ್ಕೆ ಬರುವ ವೇಳೆಗೆ ಪ್ರಸವ ವೇದನೆ ಅನುಭವಿಸಿರುವುದಂತು ಅಕ್ಷರಶಃ ಸತ್ಯ.ಅದರಲ್ಲೂ ನಮ್ಮ ಬಳ್ಳಾರಿ ಭಾಗದಲ್ಲಿ ರಂಗ ತೊಡಕಾಗಿ ಕಾಣಸಿಗುವ ಮೊದಲ ಸಮಸ್ಯೆ ಎಂದರೆ ಸ್ತ್ರೀ ಪಾತ್ರಧಾರಿಗಳು.ಆದರೆ ಈ ಭಾಗದಲ್ಲಿ 1930-40 ರ ನಂತರ ಆ ಸಮಸ್ಯೆ ನಿವಾರಣೆಯಾಯಿತು.ಅದಕ್ಕೆ ನಿದರ್ಶನವೆಂಬಂತಿದೆ ಅಭಿನೇತ್ರಿ ರೇಣುಕಾ ಬಾವಳ್ಳಿಯವರ ಈ ಲೇಖನ. ಇವರು 01.06.1974 ರಲ್ಲಿ ಸಂಡೂರು ತಾಲ್ಲೂಕಿನ ಬಾವಳ್ಳಿ (ಸುಶೀಲಾ ನಗರ)ಯಲ್ಲಿ ದಾಸರ ನರಸಿಂಹಪ್ಪ ಮತ್ತು ದಾಸರ ಸಿದ್ದಮ್ಮ ಎಂಬ ಬಡ ದಂಪತಿಗಳ ಮಗಳಾಗಿ ಜನಿಸಿದರು.ಬಾಲ್ಯದಿಂದಲೇ ಕಷ್ಟ ಅನುಭವಿಸಿದ ಇವರು ತಮ್ಮ ತಾಯಿಗೆ ಇದ್ದ ಒಂದು ಸೀರೆಯನ್ನು ಹರಿದು ಎರಡಾಗಿಸಿ ಪ್ರತಿನಿತ್ಯ ಬಳಕೆಗೆ ಮಾಡಿಕೊಂಡಿದ್ದನ್ನು ಕಂಡುಂಡವರು.ಈ ಎಲ್ಲ ಬಡತನದ ಬೇಗೆಯನ್ನು ಕಣ್ಣಾರೆ ಕಂಡ ಇವರಿಗೆ ಈ ಕೂಪದಿಂದ ಆಚೆ ಬರುವುದಕ್ಕೆ ತವಕಿಸುತ್ತಿದ್ದರು.ಆ ಸಂದಿಗ್ಧ ಪರಿಸ್ಥಿತಿಯಲ್ಲಿ ಇವರ ಕೈ ಹಿಡಿದಿದ್ದು ರಂಗಭೂಮಿ ಮಾತ್ರ.   ಬಡತನದ ದೆಸೆಯಲ್ಲಿ ತಂದೆ ತಾಯಿ ಪ್ರತಿನಿತ್ಯ ಹೊಟ್ಟೆಪಾಡಿಗಾಗಿ ಸುತ್ತಮುತ್ತಲಿನ ಪ್ರದೇಶಗಳಿಗೆ ಗಾರೆ ಕೆಲಸಕ್ಕೆ  ಹೋಗುತ್ತಿದ್ದರು.ಇದರಿಂದಾಗಿ ಓದಿನ ಹಾದಿಯನ್ನು ಕಾಣದ ಬಾವಳ್ಳಿಯವರೆಗೆ ಓರಗೆಯಾವರೊಂದಿಗಿನ ಆಟವೇ ...

ರಂಗ ಮಾಲಿಕೆ -೨೨ ಆಂಧ್ರ ಚಾರಿತ್ರಿಕ ನಾಟಕ ಪಿತಾಮಹ 'ಕೋಲಾಚಲಂ ಶ್ರೀನಿವಾಸ ರಾಯರು.

Image
  ಬಣ್ಣದ ಬದುಕು ರಂಗ ಮಾಲಿಕೆ - ೨೨ " ಚಾರಿತ್ರಿಕ ನಾಟಕ ಪಿತಾಮಹ " ಕೋಲಾಚಲಂ ಶ್ರೀನಿವಾಸ ರಾಯರು. ಬಳ್ಳಾರಿ ರಂಗಭೂಮಿ ಇತಿಹಾಸದ ಪುಟಗಳಲ್ಲಿ ಮರೀಚಿಕೆಯಾಗಿ ಕಣ್ಮರೆಯಾದ ಹಲವು ಮಹನೀಯರ ಹೆಸರುಗಳಲ್ಲಿ ಪ್ರಮುಖ ಹೆಸರೆಂದರೆ ಕೋಲಾಚಲಂ ಶ್ರೀನಿವಾಸ ರಾಯರು. ಮರಾಠಿ ನಾಟಕಗಳ ಪ್ರಭಾವ ಹೇರಳವಿದ್ದ ಬಳ್ಳಾರಿಯಲ್ಲಿ ಕನ್ನಡ ಮತ್ತು ತೆಲುಗಿನ ಕಂಪು ಪಸರಿಸಿದ ಪ್ರಮುಖರಲ್ಲೊರ್ವರಿವರು.     ಇವರು ಈಗೀನ ವಿಜಯನಗರ (ಬಳ್ಳಾರಿ) ಜಿಲ್ಲೆಯ ಹಂಪಿಯ ಸಮೀಪದ ಕಡ್ಡಿರಾಂಪುರದಲ್ಲಿ 13 ಮಾರ್ಚ್ 1854ರಲ್ಲಿ  ಸೇತುಪತಿ ಶಾಸ್ತ್ರಿ ಮತ್ತು ಅಚ್ಚಮ್ಮ ಎಂಬ ದಂಪತಿಗಳ ಮಗನಾಗಿ ಜನಿಸಿದರು.     ಇವರ ತಂದೆ ವಿಜಯನಗರ ಸಂಸ್ಥಾನದಲ್ಲಿ ಪಂಡಿತರು ಹಾಗೂ ಅಮಲ್ದಾರರಾಗಿದ್ದರಿಂದಲೇ ಬಳುವಳಿಯಾಗಿ ಇವರಿಗೂ ಹಾಗೂ ಇವರ ಅಣ್ಣಂದಿರಾದ ಕೋಲಾಚಲಂ ವೆಂಕಟರಾಮಪ್ಪ,ಕೋಲಾಚಲಂ ವೆಂಕಟರಾಯರಿಗೂ ಅಪಾರ ಪಾಂಡಿತ್ಯ ಒದಗಿ ಬಂದಿತು.ಅಣ್ಣ ವೆಂಕಟರಾಯರ ಪ್ರೀತ ಹಾರೈಕೆಯಲ್ಲಿ ಬೆಳೆಯುತ್ತಿದ್ದ ರಾಯರನ್ನು ತಾವು ಅನಂತಪುರದಲ್ಲಿ ಸಬ್ ಮ್ಯಾಜಿಸ್ಟ್ರೇಟ್ ನ್ಯಾಯಾಲದಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಕರೆದೊಯ್ದು ಅಲ್ಲಿಯೇ ಮೆಟ್ರಿಕ್ಯುಲೇಷನ್ ಮುಗಿಸಿದರು. ಅಲ್ಲದೇ ಸ್ವ ಅಧ್ಯಯನದ ಮೂಲಕ ಸಾಹಿತ್ಯ ಪಾಂಡಿತ್ಯವನ್ನು ಸಹ ಗಳಿಸಿದರು.ಅಲ್ಲದೇ ಚಿಕ್ಕ ವಯಸ್ಸಿನಲ್ಲೇ ಕನ್ನಡ, ತೆಲುಗು,ಸಂಸ್ಕೃತ,ಇಂಗ್ಲೀಷ್ ಭಾಷಾಪ್ರಭುತ್ವ ಹೊಂದಿದ್ದರಿಂದ 1876ರಲ್ಲಿ ಎಫ್.ಎ ಪರೀಕ್ಷ...

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

Image
  ಬಣ್ಣದ ಬದುಕು ರಂಗ ಮಾಲಿಕೆ - ೨೧ 'ಆಂಧ್ರ ನಾಟಕ ಕವಿತಾ ಪಿತಾಮಹ' ಧರ್ಮಾವರಂ ರಾಮಕೃಷ್ಣಾಮಾಚಾರ್ಯರು. ಬಳ್ಳಾರಿ ರಂಗಭೂಮಿ ಚರಿತ್ರೆಯಲ್ಲಿ ಮೊದಲ ನಾಟಕ ಕಂಪನಿಯನ್ನು ತೆರೆದು ಕಲಾಸಕ್ತರನ್ನೆಲ್ಲ ಒಂದೆಡೆ ಸೇರಿಸಿ, ನಟರನ್ನಾಗಿಸಿ ನಾಟಕಗಳನ್ನು ಮಾಡಿ ಇಡೀ ಕನ್ನಡ ರಂಗಭೂಮಿ ಇತಿಹಾಸದಲ್ಲಿ ಹೊಸ ಭಾಷ್ಯವನ್ನು ಬರೆದ ಮೊದಲಿಗರೆಂದರೆ ಅದು ಧರ್ಮಾವರಂ ರಾಮಕೃಷ್ಣಾಮಾರ್ಚಾರು. ಇವರು ವೃತ್ತಿಯಲ್ಲಿ ವಕೀಲರಾಗಿ,ಬರಹಗಾರರಾಗಿ,ಸಂಘಟಕರಾಗಿ ಮತ್ತು ನಟರಾಗಿ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ಪರನಾಡಿನಿಂದ ಬಂದು ಕನ್ನಡನಾಡಿನ ಘನತೆಯನ್ನು ಎತ್ತಿ ತೋರಿದವರಲ್ಲಿ ಒಬ್ಬರು.ಇಂತಹ ಮಹನೀಯರ ರಂಗ ಚರಿತ್ರೆಯ ಅರಹುವಿಕೆಯೇ ಈ ಲೇಖನದ ಆಶಯ.    ಇವರು ಕ್ರಿ.ಶ.1853 ಜನವರಿ 12 ರಂದು ಅನಂತಪುರ ಜಿಲ್ಲೆಯ  ಧರ್ಮಾವರಂ ಎಂಬಲ್ಲಿ ಕೋಮಂದೂರ್ ಕೃಷ್ಟಾಮಾರ್ಚಾರ್ಯ ಮತ್ತು ಲಕ್ಷ್ಮೀದೇವಮ್ಮ ಎಂಬುವವರ ಮಗನಾಗಿ ಜನಿಸಿದರು.   ತಂದೆ ಬಳ್ಳಾರಿ ವಾರ್ಡ್ಲಾ ಕಾಲೇಜಿನಲ್ಲಿ ತೆಲುಗು ವಿಭಾಗದ ಮುಖ್ಯಸ್ಥರಾಗಿದ್ದರು.ಅಲ್ಲದೆ ತೆಲುಗು ಭಾಷಾ ಪಂಡಿತರಾಗಿದ್ದರಿಂದ ಕೃಷ್ಣಾಮಾರ್ಚಾಯರು ಬಾಲ್ಯದಲ್ಲಿ ತಂದೆಯಿಂದಲೇ ತೆಲುಗು ಮತ್ತು ಸಂಸ್ಕೃತ ಭಾಷೆಗಳನ್ನು ಕಲಿತರು.ಅಲ್ಲದೇ ತಮ್ಮ ತಾತರಿಂದ ರಘವಂಶಮು, ಚಂಪೂ ರಾಮಾಯಣಮು, ಪ್ರತಾಪರುದ್ರಿಯಮು ಎಂಬ ಮಹಾಗ್ರಂಥಗಳನ್ನು ಓದಿದರು.ನಂತರ ಮಹಾ ಮೇಧಾವಿಯಾದ ಆಚಾರ್ಯರು 1870ರಲ್ಲಿ ಮೆಟ್ರಿಕ್ಯುಲೇಷನ್ ಪ್ರಥಮ ದರ್...

ರಂಗ ಮಾಲಿಕೆ - ೨೦ ಗಮಕ ಕಲಾನಿಧಿ ' ಡಾ.ಜೋಳದರಾಶಿ ದೊಡ್ಡನಗೌಡರು '

Image
 ಬಣ್ಣದ ಬದುಕು ರಂಗ ಮಾಲಿಕೆ - ೨೦ ಗಮಕ ಕಲಾನಿಧಿ 'ಡಾ.ಜೋಳದರಾಶಿ ದೊಡ್ಡನಗೌಡರು'. ಜೋಳದರಾಶಿ ದೊಡ್ಡನಗೌಡರು ನವೋದಯ ಕಾಲದ ಮಹತ್ವದ ಲೇಖಕರಲ್ಲಿ ಒಬ್ಬರು. ಕನ್ನಡ ಕಟ್ಟಿದ ಧೀಮಂತರಲ್ಲಿ ಒಬ್ಬರು. ಕನ್ನಡ-ತೆಲುಗು ಉಭಯ ಭಾಷೆಗಳಲ್ಲೂ ಪರಿಣತಿ ಹೊಂದಿ ಕೃತಿ ರಚನೆ ಮಾಡಿದವರು. ನಾಟಕ ಕೃತಿ ರಚನೆ, ಅಭಿನಯ, ನಿರ್ದೇಶನ ಮಾಡಿದ್ದೂ ಅಲ್ಲದೆ, ನಾಟಕ ಕಂಪೆನಿ ಕಟ್ಟಿ ರಾಜ್ಯದಾದ್ಯಂತ ಸಂಚರಿಸಿದವರು. ಸಾಹಿತ್ಯ, ಸಂಗೀತ, ಗಮಕ, ರಂಗಭೂಮಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಇವರ ಸೇವೆ ಅನನ್ಯ. ಇವರ ಪ್ರತಿಭೆಯ - ಸೇವೆಯ ವಿವರಗಳನ್ನು ಈ ಲೇಖನದಲ್ಲಿ ಚಿತ್ರಿಸಲಾಗಿದೆ. ಬಳ್ಳಾರಿ ಸೀಮೆಯ ಸಾಂಪ್ರದಾಯಕ ಹಳ್ಳಿಯಾದ ಜೋಳದರಾಶಿಯು, ಕರ್ನಾಟಕ-ಆಂಧ್ರ ಗಡಿಯ ಕೊನೆಯ ಊರು. ಈ ಊರಿನಲ್ಲಿ ಜೋಳದರಾಶಿ ದೊಡ್ಡನಗೌಡರು ಜುಲೈ 27, 1910ರಂದು ಜನಿಸಿದರು. ತಂದೆ ಪಂಪನಗೌಡರು ಮತ್ತು ತಾಯಿ ರುದ್ರಮ್ಮನವರು.400 ಎಕರೆ ಭೂಮಿಯನ್ನು ಹೊಂದಿದ್ದ ತಂದೆಯವರು ಊರಿನ ಗೌಡಿಕೆ ಮಾಡುತ್ತಿದ್ದರು.ಅಲ್ಲದೇ ಕಲಾಸಕ್ತಿ ತಂದೆಯಿಂದಲೇ ಗೌಡರಿಗೆ ಬಳುವಳಿಯಾಗಿತ್ತು.     ಅಲ್ಲದೇ ಅವರ ರಂಗಹೆಜ್ಜೆಯ ಕುರಿತಾಗಿ ಅನುಭವವನ್ನು ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ವರ್ಣಿಸಿದ್ದಾರೆ: "ನನ್ನ ವಯಸ್ಸು 6-7 ಇರಬಹುದು. ನಾಟಕ ‘ಕನಕತಾರ’. ಆ ನಾಟಕದ ಕಥೆಯೇನೊ ತಿಳಿಯದು. ಆದರಲ್ಲಿ ಋಷ್ಯಾಶ್ರಮ. ಅಲ್ಲಿ ಒಬ್ಬ ಋಷಿ. ಆ ಋಷಿಯ ಶಿಷ್ಯರಲ್ಲಿ ನಾನೊಬ್ಬ ಬಾಲಶಿಷ್ಯ. ಪದವನ್ನೇನೊ ಕಲಿತು ಹಾಡುತ್ತಿದ...