ರಂಗ ಮಾಲಿಕೆ -೧೧ ಸಾಂಬಶಿವ ದಳವಾಯಿ
ಬಯಲು ಸೀಮೆಯ ಸಿಂಹ ಧ್ವನಿ - ಸಾಂಬಶಿವ ದಳವಾಯಿ ಅರಳಿದ ಪ್ರತಿಯೊಂದು ಹೂವು ದೇವರ ಮುಡಿ ಸೇರುವುದಿಲ್ಲ.ಉದಯಿಸಿದ ಪ್ರತಿಯೋರ್ವ ಕಲಾವಿದ ಕಲಾಮಾತೆಯ ಸುತರೆನಿಸುವುದಿಲ್ಲ. ಆದರೆ ಹುಟ್ಟಿನಿಂದಲೇ ಕಲಾ ಪ್ರೇಮಿಯಾಗಿ ಹತ್ತಾರು ಮನೆಗಳಿದ್ದ ಪುಟ್ಟ ಹಳ್ಳಿಯಿಂದ ದಿಲ್ಲಿಯವರೆಗೆ ತನ್ನ ಕಲಾ ಚೈತನ್ಯವನ್ನು ಪಸರಿಸಿದ ವಿರಳರಲ್ಲಿ ವಿರಳರೆನಿಸಿದ ಒರ್ವರೆಂದರೆ ಅದು ಬಳ್ಳಾರಿ ಬಯಲು ಸೀಮೆಯ ಸಿಂಹ ಧ್ವನಿ ' ಸಾಂಬಶಿವ ದಳವಾಯಿ'. ಬಾಲ್ಯ : ಇವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಿಷ್ಣಹಳ್ಳಿ ಎಂಬ ಪುಟ್ಟ ಹಳ್ಳಿಯ ' ರಾಮ ಸಿದ್ಧಪ್ಪ ದಳವಾಯಿ' ಮತ್ತು 'ಸಿದ್ಧಮ್ಮ' ದಂಪತಿಗಳ ಮಗನಾಗಿ ೧೩-೦೪-೧೯೫೮ರಲ್ಲಿ ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣ ಬಿಷ್ಣಹಳ್ಳಿ ಮತ್ತು ಕೂಡ್ಲಿಗಿಯ ಆಶ್ರಮ ಶಾಲೆಯಲ್ಲಿ ಸಾಗಿ ನಂತರ ಪ್ರೌಢಶಿಕ್ಷಣವನ್ನು ಚಿಕ್ಕಜೋಗಿಹಳ್ಳಿಯಲ್ಲಿ ನಿರ್ವಹಿಸುವಾಗ ಹತ್ತನೇ ತರಗತಿಯಲ್ಲಿ ಅನುತ್ತಿರ್ಣರಾಗುತ್ತಾರೆ.ಈ ಒಂದು ವರ್ಷದಲ್ಲೇ ಕಮಲಾಪುರದ ಪಂಪಾ ವಿದ್ಯಾಪೀಠದಲ್ಲಿ ತೋಟಗಾರಿಕೆ ಮತ್ತು ಕರಕುಶಲ ತರಬೇತಿ ಕೇಂದ್ರದಲ್ಲಿ ತರಬೇತಿ ತರುವಾಯ ಹತ್ತನೇ ತರಗತಿ ಉತ್ತಿರ್ಣರಾಗಿ ನಂತರ ದಾವಣಗೆರೆ ಮೋತಿ ವೀರಪ್ಪ ಜೂನಿಯರ್ ಕಾಲೇಜಿನಲ್ಲಿ ಕಾಮರ್ಸ್ ವಿದ್ಯಾರ್ಥಿಯಾದರು. ರಂಗದೊಲವು : ಮೊದಲಿಗೆ ಇವರಲ್ಲಿ ರಂಗದೊಲವನ್ನು ದೊಡ್ಡಾಟದ ಭಾಗವತರಾಗಿದ್ದ ಇವರ ತಂದೆ ತುಂಬಿದರು.ಅಂತೆಯೇ ಆಶ್ರಮ ಶಾಲೆಯಲ್ಲ...