Posts

Showing posts from February, 2022

ರಂಗ ಮಾಲಿಕೆ -೫೬ ಬಳ್ಳಾರಿ ಸಾರಿಗೆ ಇಲಾಖೆಯಲ್ಲಿದ್ದ ಅಗಾಧ ರಂಗ ಪ್ರತಿಭೆ 'ಎಂ.ಶ್ರೀನಿವಾಸುಲು'

Image
  ಬಣ್ಣದ ಬದುಕು ರಂಗ ಮಾಲಿಕೆ -೫೬    ಬಳ್ಳಾರಿ  ಸಾರಿಗೆ ಇಲಾಖೆಯಲ್ಲಿದ್ದ ಅಗಾಧ ರಂಗ ಪ್ರತಿಭೆ 'ಎಂ.ಶ್ರೀನಿವಾಸುಲು'    ಬದುಕಿನುದ್ದಕ್ಕೂ ಹಲವಾರು ಅಡತಡೆಗಳು ಇದ್ದಿದ್ದೇ.ಆದರೆ ಅವುಗಳನ್ನು ಎದುರಿಸುವಲ್ಲಿ ಕೆಲವರು ಸೋತು ಸತ್ತರೆ ಇನ್ನು ಕೆಲವರು ಗೆದ್ದು ಬೀಗುತ್ತಾರೆ.ಆದರೆ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಗೆಲ್ಲುವ ಚೈತನ್ಯ ತುಂಬುವ ಹಲವು ಮಾರ್ಗಗಳಲ್ಲಿ ರಂಗಭೂಮಿ ಅಗ್ರಮಾನ್ಯವಾದುದ್ದಾಗಿದೆ.ಆ ನಿಟ್ಟಿನಲ್ಲಿ ವೃತ್ತಿ ಮತ್ತು ಪ್ರವೃತ್ತಿಯನ್ನು ಸಮರ್ಥವಾಗಿ ನಿಭಾಯಿಸಿ ಬದುಕಿನುದ್ದಕ್ಕೂ ಗೆದ್ದು ಬೀಗಿದ ಹಲವರಲ್ಲಿ ಒಬ್ಬರು ಬಳ್ಳಾರಿ ಸಾರಿಗೆ ಇಲಾಖೆಯ ನಿವೃತ್ತ ನೌಕರರಾದ ಎಂ.ಶ್ರೀನಿವಾಸುಲು.     ಇವರು ಕ್ರಿ.ಶ. ೦೧.೦೯.೧೯೬೨ ರಲ್ಲಿ ಬಳ್ಳಾರಿಯ ಸತ್ಯ ನಾರಾಯಣ ಪೇಟೆಯಲ್ಲಿ  ಎಂ.ರಾಮುಡು ಮತ್ತು ಪಾರ್ವತಮ್ಮರ ಮಗನಾಗಿ ಜನಿಸಿದರು. ಹುಟ್ಟಿದ್ದು ಬಡ ಕುಟುಂಬದಲ್ಲಾದ್ದರಿಂದ ಮತ್ತು ಅಪ್ಪನ ಮಧ್ಯ ವ್ಯಸನದಿಂದಾಗಿ ಒಂದ್ಹೊತ್ತಿನ ಊಟಕ್ಕೂ ಪರದಾಡುವ ಸಂದರ್ಭದಲ್ಲಿ ಅಜ್ಜಿ ಲಕ್ಷಮ್ಮಮ್ಮ ಮತ್ತು ಅಮ್ಮ ಪಾರ್ವತಮ್ಮರ ಛಲಭರಿತ ಪ್ರೋತ್ಸಾಹ ಮತ್ತು ಕಾರ್ಯದಿಂದಾಗಿ, ೧೦ನೇ ತರಗತಿಯವರೆಗೆ ಬಳ್ಳಾರಿಯ ಮದ್ದೀಕೇರಿ ಭೀಮಯ್ಯ ಸ್ವಂತ ಲಿಂಗಣ್ಣ ಶೆಟ್ಟಿ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿದರು. ಆದರೆ ಮುಂದೆ ಓದಲು ಆರ್ಥಿಕವಾಗಿ ಸಬಲರಿಲ್ಲದ ಕಾರಣ ಆಗ ಕರ್ನಾಟಕ ಸಾರಿಗೆ ಇಲಾಖೆಯವರು ಭದ್ರತಾ ಸಿಬ್ಬ...

ರಂಗ ಮಾಲಿಕೆ -೫೫ ಬಳ್ಳಾರಿ ರಂಗಭೂಮಿಯ ಹಾಸ್ಯ ಕಿರೀಟಿ 'ಗೆಣಕಿಹಾಳ್ ಎಂ.ಪಾರ್ವತೀಶ್'

Image
  ಬಣ್ಣದ ಬದುಕು ರಂಗ ಮಾಲಿಕೆ -೫೫  ಬಳ್ಳಾರಿ ರಂಗಭೂಮಿಯ ಹಾಸ್ಯ ಕಿರೀಟಿ 'ಗೆಣಕಿಹಾಳ್ ಎಂ.ಪಾರ್ವತೀಶ್'       'ಕಲಾಸೇವೆಯೇ ಕಲಾ ಮಾತೆಯ ಸೇವೆ' ಎಂಬ ಭಾವದಲ್ಲಿ ಕಲಾ ಕಾಯಕ ಮಾಡುವ ಮನಸ್ಸುಗಳ ಸಂಖ್ಯೆ ದಿನೇದಿನೇ ಇಳಿಮುಖವಾಗುತ್ತಿರುವಾಗ, ಇಲ್ಲೊಬ್ಬ ರಂಗಕರ್ಮಿ ಯಾವುದೇ ಫಲಾಪೇಕ್ಷೆಯಿಲ್ಲದೆ ಉಚಿತವಾಗಿ,ಯಾವುದೇ ಸಂಭಾವನೆ ಪಡೆಯದೇ ತನ್ನ ನಟನಾ ಸಾಮರ್ಥ್ಯದ ಮೂಲಕ ಹಾಸ್ಯರಸವನ್ನು ಇಡೀ ನಾಡಿಗೆ ಉಣಬಡಿಸಿ ಎಲ್ಲರನ್ನೂ ನಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರೇ ಕುರುಗೋಡು ತಾಲ್ಲೂಕಿನ ಗೆಣಕಿಹಾಳ್ ಗ್ರಾಮದ ಎಂ.ಪಾರ್ವತೀಶ್'.    ಇವರು ೨೩.೧೧.೧೯೭೪ರಲ್ಲಿ ಗೆಣಕಿಹಾಳ್ ಗ್ರಾಮದಲ್ಲಿ ರುದ್ರಯ್ಯ ಸ್ವಾಮಿ ಮತ್ತು ಪಾರ್ವತಮ್ಮರ ಮಗನಾಗಿ ಜನಿಸಿದರು.ಮಧ್ಯಮ ಕುಟುಂಬದಲ್ಲಿ ಜನಿಸಿದ್ದರಿಂದ ಪದವಿಯವರೆ ವಿದ್ಯಾಭ್ಯಾಸ ಪಡೆದಿದ್ದಲ್ಲದೇ ಖಾಸಗಿ ಬಯೋಕೆಮಿಕಲ್ ಕಂಪನಿಯ ಮ್ಯಾನೇಜರ್ ನೌಕರಿಯನ್ನು ಹೊಂದಿದ್ದಾರೆ. ವೃತ್ತಿಯಲ್ಲಿ ಮತ್ತು ಪ್ರವೃತ್ತಿಯಲ್ಲಿ ಯಶಸ್ವಿ ಮಾದರಿ ಎನಿಸಿದ್ದಾರೆ.   ಬಾಲ್ಯದಿಂದಲೂ  ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದ ಹಳ್ಳಿಯಲ್ಲಿನ ವಾತಾವರಣದ ರಸಪಾಕ ಸವಿಯುತ್ತಲೇ ತಮ್ಮೊಳಗೊಬ್ಬ ಅಭಿನೇತೃವನ್ನು ಅವಿರ್ಭವಿಸಿಕೊಂಡರು.ಅಂತೆಯೇ ಶಾಲಾ ಹಂತದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅದರ ನೈಜರೂಪ  ಅನಾವರಣಗೊಂಡು, ಅಲ್ಲಿ ದೊರೆತ ಧನಾತ್ಮಕ ಪ್ರೇರಣೆಗಳ ಮೂಲಕ ಮುಂದೆ ತಮ್ಮ ೧೨ ನೇ ವಯಸ್ಸಿ...

ರಂಗ ಮಾಲಿಕೆ - ೫೪ ಬಹುಮುಖ ವ್ಯಕ್ತಿತ್ವದ ಪ್ರತಿಭಾ ಸಂಪನ್ನ " ನಾಡೋಜ ಬೆಳಗಲ್ ವೀರಣ್ಣನವರು."

Image
 ಬಣ್ಣದ ಬದುಕು ರಂಗ ಮಾಲಿಕೆ - ೫೪   ಬಹುಮುಖ ವ್ಯಕ್ತಿತ್ವದ ಪ್ರತಿಭಾ ಸಂಪನ್ನ " ನಾಡೋಜ ಬೆಳಗಲ್ ವೀರಣ್ಣನವರು."       ಬಳ್ಳಾರಿಯ ರಂಗಭೂಮಿಯಲ್ಲಿ ಅಚ್ಚಳಿಯದ ಹೆಸರುಗಳಲ್ಲಿ ಒಂದು ಜೋಳದ ರಾಶಿ ದೊಡ್ಡನಗೌಡರು. ಇವರ ಶಿಷ್ಯ ವೈ.ಎಂ.ಚಂದ್ರಯ್ಯಸ್ವಾಮಿ ಈ ಇರ್ವರ ಅದಮ್ಯ ಚೇತನ ಶಕ್ತಿಯಲ್ಲಿ ಪಳಗಿ ಈಡೀ ನಾಡಿಗೆ ಬೆಳಗಿ ಹೆಸರಾದ ಪ್ರತಿಭಾ ಸಂಪನ್ನರೆಂದರೆ 86ರ ಇಳಿ ವಯಸ್ಸಿನಲ್ಲೂ ತಮ್ಮ ರಂಗಭೂಮಿಯ ಹರೆಯತನವನ್ನು ಉಳಿಸಿಕೊಂಡಿರುವ ಬಳ್ಳಾರಿಯ ರಂಗ ಸಂಪನ್ನ ಬೆಳಗಲ್ ವೀರಣ್ಣನವರು.     ಬೆಳಗಲ್ಲು ವೀರಣ್ಣನವರು ಪಿಟೀಲುವಾದಕ, ಸ್ತ್ರೀಪಾತ್ರಾಭಿನಯ ದೊಂದಿಗೆ ಬಯಲಾಟಗಳ ಮುಮ್ಮೇಳ ಹಾಡುಗಾರರಾಗಿದ್ದ ಸಣ್ಣ ಹನುಮಂತಪ್ಪನವರ ಮಗನಾಗಿ 1-7-1936ರಂದು ಬಳ್ಳಾರಿ ಸನಿಹದ ಬೆಳಗಲ್ಲು ಗ್ರಾಮದಲ್ಲಿ ಜನಿಸಿದರು, ಎಂಟು ವರ್ಷದ ಬಾಲಕ ನಾಗಿದ್ದಾಗಲೇ ತಂದೆ ವಿಧಿವಶರಾಗಿ ವೀರಣ್ಣ ಅನಾಥರಾದರು. ಎಳೆಯ  ವಯಸ್ಸಿನಲ್ಲಿಯೇ ಭಕ್ತ ಪ್ರಹ್ಲಾದ ನಾಟಕದಲ್ಲಿ ಪ್ರಹ್ಲಾದನಾಗಿ ಅಭಿನಯಿಸಿದ ವೀರಣ್ಣನವರು ಮುಂದೆ ಹಲವು ಕಂಪನಿ ನಾಟಕಗಳಲ್ಲದೇ ಹವ್ಯಾಸಿ ಕಲಾವಿದರಾಗಿ ರಂಗಭೂಮಿಯಲ್ಲಿ ಖ್ಯಾತಿ ಪಡೆದರು. ಮೊದಮೊದಲು ಸ್ತ್ರೀಪಾತ್ರದಿಂದ ಜನಪ್ರಿಯರಾದ ವೀರಣ್ಣನವರು ಹಾಸ್ಯ ಪಾತ್ರ, ವ್ಹಿಲನ್ ಪಾತ್ರಗಳಿಂದಲೂ ಮಿಂಚಿದರು. ಇವರಿಗೆ ಹೆಸರು ತಂದುಕೊಟ್ಟದ್ದು ಕಂದಗಲ್ಲುಹನುಮಂತರಾಯರ ರಕ್ತರಾತ್ರಿ ನಾಟಕದ ಶಕುನಿ ಪಾತ್ರ. ಬೆಳಗಲ್ಲು ವೀರಣ್ಣನವರ ಟಿಪ್ಪ...

ರಂಗ ಮಾಲಿಕೆ -೫೩ ಪೋಲಿಸ್ ಇಲಾಖೆಯಲ್ಲೊಬ್ಬ ರಂಗ ಚತುರ " ಟಿ.ಎ.ಕುಬೇರ".

Image
  ಬಣ್ಣದ ಬದುಕು ರಂಗ ಮಾಲಿಕೆ -೫೩ ಪೋಲಿಸ್ ಇಲಾಖೆಯಲ್ಲೊಬ್ಬ ರಂಗ ಚತುರ " ಟಿ.ಎ.ಕುಬೇರ". " ಎಲ್ಲ ಕ್ಷೇತ್ರದಲ್ಲೂ ಅತಿರತಮಹಾರತರನ್ನು ಮೀರಿಸುವ ಕಲಾ ನೈಪುಣ್ಯತೆ ಉಳ್ಳ ಅಭಿನೇತ್ರಿಗಳಿದ್ದಾರೆ,ಆದರೆ ಕಾರ್ಯ ಬಾಹುಳ್ಯದ ನಡುವೆ ಉತ್ತಮ ಅವಕಾಶ ಮತ್ತು ಪ್ರೋತ್ಸಾಹ ತಾನಾಗಿಯೇ ದೊರೆತಾಗ  ಮಾತ್ರ ಪ್ರಜ್ವಲಿಸಿ ರಂಗಪ್ರಭೆ ತೋರುವಲ್ಲಿ ಅನುಮಾನವಿಲ್ಲ" ಈ ಮಾತಿಗೆ ನಿದರ್ಶನವೆಂದರೆ ಠಾಣೆಯಲ್ಲಿ ಆರಕ್ಷರಾಗಿದ್ದರೂ,ಕಲಾ ಪ್ರಪಂಚದಲ್ಲಿ ಅತಿರಥರಾದ 'ಟಿ.ಎ.ಕುಬೇರರು. ಇವರು ಸಂಡೂರು ತಾಲೂಕಿನ ಎಂ.ತುಂಬರಗುದ್ದಿಯಲ್ಲಿ ತಿಪ್ಪೇಸ್ವಾಮಿ ಮತ್ತು ತಿಪ್ಪಮ್ಮ ದಂಪತಿಗಳ ಕೊನೆಯ ಮಗನಾಗಿ ೦೧.೦೪.೧೯೬೪ರಲ್ಲಿ ಜನಿಸಿದರು. ಇವರ ತಂದೆ ತಾಯಿಗೆ ಯಾವುದೇ ಸಾಂಸ್ಕೃತಿಕ ವಾತಾವರಣದ ಪ್ರಭಾವವಿಲ್ಲದಿದ್ದರೂ ತಮ್ಮ ಚಿಕ್ಕಪ್ಪ ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರಭಾವದಿಂದಾಗಿ ಬಾಲ್ಯದಲ್ಲೇ ಕಲಾಸಕ್ತರಾಗುವಂತೆ ಮಾಡಿತು.ಅಂತೆಯೇ ತಮ್ಮ ಪ್ರಾಥಮಿಕ ವಿಧ್ಯಾಭ್ಯಾಸದ ಸಮಯದಲ್ಲಿ ಅಂದರೆ ತಮ್ಮ ೮ನೇ ವಯಸ್ಸಿಗೆ 'ರತ್ನ ಮಾಂಗಲ್ಯ' ಎಂಬ ನಾಟಕದಲ್ಲಿ ಹಾರ್ಮೋನಿಯಂ ಮೇಷ್ಟ್ರಾದ ಶಂಕ್ರಪ್ಪ ಮತ್ತು ನಾಗಪ್ಪ ಹೂಗಾರರ ಮೂಲಕ ೧೯೮೯ರಲ್ಲಿ  'ಬಾಬು' ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ರಂಗಭೂಮಿಗೆ ಪಾದಾರ್ಪಣೆ ಮಾಡಿದರು.ಅದೇ ಹುಮ್ಮಸ್ಸಿನಲ್ಲಿ ಅದೇ ನಾಟಕದ ಮೂರ್ನಾಲ್ಕು ಪಾತ್ರಗಳನ್ನು ನಿರ್ವಹಿಸಿದರು.ನಂತರ...

ರಂಗ ಮಾಲಿಕೆ - ೫೨ ರಂಗಭೂಮಿಗೆ ರಂಗು ತುಂಬಿದ ರತಿದೇವಿ ' ಬಯಲಾಟ ಸುಜಾತಮ್ಮ'.

Image
 ಬಣ್ಣದ ಬದುಕು ರಂಗ ಮಾಲಿಕೆ - ೫೨   ರಂಗಭೂಮಿಗೆ ರಂಗು ತುಂಬಿದ ರತಿದೇವಿ ' ಬಯಲಾಟ ಸುಜಾತಮ್ಮ'. 'ಹಣ್ಣೆಲೆ ಉದುರುವಾಗ ಚಿಗುರೆಲೆ ನೋಡಿ ಅಪಹಾಸ್ಯ ಮಾಡುವುದು ತರವಲ್ಲ' ಒಂದಾನೊಂದು ಕಾಲಘಟ್ಟದ ರಂಗಭೂಮಿಯಲ್ಲಿ ಮಹಾರಾಣಿಯಾಗಿ ಮೆರೆದ ಕಲಾವಿದರು ಇಂದಿಗೂ ವಾಸಿಸಲು ಕನಿಷ್ಠವಾದ ಸ್ವಂತ ಸೂರಿಲ್ಲದೇ , ಒಂದ್ಹೊತ್ತಿಗೂ ಗತಿಯಿಲ್ಲದೇ ಪರದಾಡುತ್ತಿರುವ ಅದೆಷ್ಟೋ ನಟ - ನಟಿಯರು ನಮ್ಮೊಂದಿಗೆ ಬದುಕುತ್ತಿದ್ದಾರೆ. ಅಂತಹ ಮಹನೀಯರಲ್ಲಿ ಒಬ್ಬರೂ ಬಳ್ಳಾರಿಯ ಬಯಲಾಟದ ಸುಜಾತಮ್ಮ.  ಇವರು ಕ್ರಿ.ಶ‌.೧೯೫೨ರಲ್ಲಿ ಕರ್ನೂಲ್ ಜಿಲ್ಲೆಯ ಆಲೂರು ಮಂಡಲದ ಕುಂದನಗುರ್ತಿ ಎಂಬ ಹಳ್ಳಿಯ ಭೀಮ ದಾಸಪ್ಪ ಮತ್ತು ಶಿವಮ್ಮ ಎಂಬ ದಂಪತಿಗಳ ಮಗಳಾಗಿ ಜನಿಸಿದರು.ಇವರ ತಂದೆ ಶ್ರೇಷ್ಠ ಭಜನಾ ಹಾಡುಗಳಿಗೆ ಹಾರ್ಮೋನಿಯಂ ಕಲಾವಿದರಾಗಿದ್ದರಲ್ಲದೇ ಉಭಯ ಭಾಷಾ ಹಾಡುಗಾರರಾಗಿದ್ದರು.ಹಾಗಾಗಿ ಕರ್ನಾಟಕಾಂಧ್ರದ ಗಡಿ ಭಾಗದ ಅನೇಕ ಹಳ್ಳಿಗಳಲ್ಲಿ ಭಜನಾ ಹಾಡಲು ಮತ್ತು ಆಸಕ್ತರಿಗೆ ಕಲಿಸಲು ಹೋಗುತ್ತಿದ್ದರು. ಅಂತೆಯೇ ತಾವು ಹೋದಕಡೆಯಲೆಲ್ಲ ತಮ್ಮ ಮುದ್ದಿನ ಮಗಳು ಸುಜಾತಮ್ಮರನ್ನು ತಮ್ಮೊಂದಿಗೆ ಕರೆದೊಯ್ಯುತ್ತೊದ್ದರು.ಹೀಗೆ ಕರೆದೊಯ್ದ ಸಂದರ್ಭದಲ್ಲಿ  ನರೆದ ಜನರ ಮುಂದೆ ಮಗಳನ್ನು ತಮ್ಮ ಸಂತೋಷಕ್ಕಾಗಿ ಹಾಡಿಸುತ್ತಿದ್ದರು. ಆ ಮೂಲಕ ಸುಜಾತರಮ್ಮರಿಗೆ ಸಂಗೀತದ ಪ್ರಥಮ ಗುರುವಾಗಿ ಪರಿಣಮಿಸಿದರು.    ಹೀಗೆ ತಂದೆಯೊಂದಿಗೆ ವಿಜಯವಾಡ,ಗುಂತಕಲ್ ಮುಂತಾದ ಕಡೆಯಲೆಲ್ಲಾ ಹಾಡು...