Posts

Showing posts from January, 2022

ರಂಗ ಮಾಲಿಕೆ -೫೧ ರಕ್ತರಾತ್ರಿಯ ಅಂಬಾಸಿಡರ್ 'ರಾರಾವಿ ಚಿದಾನಂದ ಗವಾಯಿಗಳು'.

Image
 ಬಣ್ಣದ ಬದುಕು ರಂಗ ಮಾಲಿಕೆ -೫೧ ರಕ್ತರಾತ್ರಿಯ ಅಂಬಾಸಿಡರ್ 'ರಾರಾವಿ ಚಿದಾನಂದ ಗವಾಯಿ'. ರಂಗಭೂಮಿ ಎನ್ನುವುದು ಕೇವಲ ಒಂದೇ ರಂಗಿನ ಲೋಕವಲ್ಲ, ಬದಲಾಗಿ ಇದೊಂದು ರಂಗ ರಂಗಿನ ಹೂಗಳ ಉದ್ಯಾನವನ. ಹಾಗಾಗಿ ಇಲ್ಲಿನ ಬಣ್ಣ ಬಣ್ಣದ ಹಕ್ಕಿಗಳು ಚಿಲಿಪಿಲಿ ನಿನಾದದ ಮೂಲಕ ಸಹಸ್ರಾರು ಕಲಾ ರಸಿಕರ ಮನಗೆದ್ದ ಸಹಸ್ರಾರು ಕಥಾನಕಗಳನ್ನು ನಾವು ಕಾಣಬಹುದು. ಅಂತಹ ಮನರಂಜನಾ ಕಥಾನಕಗಳ ನಾಯಕ-ನಾಯಕಿಯರಲ್ಲಿ ಒಬ್ಬರಾದ ರಂಗ ಸಾಮಂತರೆಂದರೆ ರಾರಾವಿಯ ಚಿದಾನಂದ ಗವಾಯಿಗಳು.         ಇವರು  ಕ್ರಿ.ಶ.೧೯೭೬ರಲ್ಲಿ ಸಿರುಗುಪ್ಪ ತಾಲ್ಲೂಕಿನ ರಾರಾವಿಯ ಗೋವಿಂದಪ್ಪ ಮತ್ತು ಅಯ್ಯಮ್ಮರ ಮಗನಾಗಿ ಜನಿಸಿದರು. ಬಾಲ್ಯದಲ್ಲಿ ತಮ್ಮ ತಾತ ಚಿದಾನಂದಪ್ಪರು ರಂಗ ಕಲಾವಿದರಾಗಿದ್ದರಿಂದ ಕಲೆಯೆಂಬುದು ಇವರಲ್ಲಿ ರಕ್ತಗತವಾಗಿ ಬಂದಿತ್ತು. ಅದಕ್ಕೆ ಇಂಬು ನೀಡುವಂತೆ ರಾರಾವಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೫ ನೇ ತರಗತಿ ಓದುವಾಗ ಶಿಕ್ಷಕರಾದ ಮಾಯಪ್ಪ ಮತ್ತು ಜಂಬಣ್ಣರಿಂದ ಭಾರತವೀರ ಎಂಬ ನಾಟಕದಲ್ಲಿ ಪುರು ಪಾತ್ರಕ್ಕೆ  ಬಣ್ಣ ಹಚ್ಚಿದರು.ಅಲ್ಲಿ ತೋರಿದ ರಂಗಾಸಕ್ತಿಯಿಂದ ಮುಂದೆ ಜಂಬ ಕೊಚ್ಚಿದ ಉತ್ತರ ಕುಮಾರ, ಏಕಲವ್ಯ ನಾಟಕಗಳಲ್ಲಿ ಅಭಿನಯಿಸುವ ಅವಕಾಶ ದೊರೆಯಿತು.    ಏಳನೇ ತರಗತಿಯಲ್ಲಿ ಓದುವಾಗ ಊರಲ್ಲಿ ಕ್ಯಾಂಪ್ ಮಾಡಿದ್ದ ನಾಟಕ ಕಂಪನಿ ವಿನಾಃಕರಣ ಆ ದಿನ ರಜೆ ಮಾಡಿದ್ದರು. ಆಗ ಅದೇ ಸಮಯವನ್ನು ಬಳಸಿಕೊಂಡ ಶಾಲಾ ಮುಖ್ಯೋಪಾಧ್ಯಾಯ ವೀರ...

ರಂಗ ಮಾಲಿಕೆ -೫೦ ಗಡಿನಾಡಿನ ರಂಗ ದುರ್ದೈವಿ 'ಕೊತ್ತಲಚಿಂತ ವಿರೂಪಾಕ್ಷಿ ರೆಡ್ಡಿ'.

Image
 ಬಣ್ಣದ ಬದುಕು ರಂಗ ಮಾಲಿಕೆ -೫೦ ಗಡಿನಾಡಿನ ರಂಗ ದುರ್ದೈವಿ 'ಕೊತ್ತಲಚಿಂತ ವಿರೂಪಾಕ್ಷಿ ರೆಡ್ಡಿ'.       'ಕೆಲವರಿಗೆ ಮುಟ್ಟಿದ್ದೆಲ್ಲ ಹೊನ್ನು, ಇನ್ನು ಕೆಲವರಿಗೆ ಮುಟ್ಟಿದ್ದೆಲ್ಲ ಮಣ್ಣು' ಇವೆರಡರಲ್ಲಿ ಯಾವುದೇ ಒಂದು ವರವಾದರೂ ವರದಾನ ಪಡೆದವರ ಪಾಲಿಗೆ ಅದು ಮುಳ್ಳೇ ಸರಿ. ಅಂತಹ ನಿದರ್ಶನಗಳಲ್ಲಿ ಒಂದು ಎಂಬಂತೆ ಹಿರಿಯ ರಂಗ ಕಲಾವಿದ ಕೊತ್ತಲಚಿಂತ ವಿರೂಪಾಕ್ಷಿ ರೆಡ್ಡಿಯವರ ಬಣ್ಣದ ಬದುಕಿನುದ್ದಕ್ಕೂ ಹಾಸುಹೊಕ್ಕಾಗಿದ್ದ ಸಂದರ್ಭಗಳು ಅನೇಕವು.      ಇವರು ಕ್ರಿ.ಶ೧೯೫೪ ರಲ್ಲಿ ಸಿರುಗುಪ್ಪ ತಾಲ್ಲೂಕಿನ ಅಗಸಲದಿನ್ನೆಯ ಶೇಷಾರೆಡ್ಡಿ ಮತ್ತು ಮಹಾದೇವಮ್ಮ ಎಂಬುವವರ ಮಗನಾಗಿ ಜನಿಸಿದರು. ಇವರು ಉಳ್ಳವರ ಕುಟುಂಬದಲ್ಲಿ ಜನಿಸಿದ್ದರಿಂದ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆಯಾಗದೇ   SSLCವರೆಗೆ ಓದಿದರು. ಆದರೆ ಎಡಬಿಡದೆ ಕಾಡುತ್ತಿದ್ದ ಇವರ ಅಂತರಾಳದ ಅಭಿನಯಾಸಕ್ತಿ ಇವರ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುವಂತೆ ಪ್ರಚೋದಿಸಿತು.ಆದರೆ ರಂಗಭೂಮಿಯಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆಯೂ ಮಾಡಿತು ಎಂದರೆ ತಪ್ಪಾಗಲಾರದು.    ಸಿನಿರಂಗದ ದೃವತಾರೆ ಡಾ.ರಾಜಕುಮಾರರ ಅಭಿನಯದ ಮಾಂತ್ರಿಕತೆಯ ಮೋಡಗ ಮರಳಾಗಿ ಇವರು ಸಹ ಅಣ್ಣಾವ್ರ ತರ ಬೆಳೆಯಬೇಕೆಂದು ತಮ್ಮ ೨೦ನೇ ವಯಸ್ಸಿನಲ್ಲಿ ಮನೆಯಲ್ಲಿದ್ದ ಹಣ,ಒಡವೆಯನ್ನು ಕದ್ದು ಸಿನಿಮಾ ನಟನಾಗಬೇಕೆಂಬ ಹೆಬ್ಬಯಕೆಯಿಂದ ಬೆಂಗಳೂರಿಗೆ ಪಲಾಯನ ಮಾಡಿದರು. ಅಲ...

ರಂಗ ಮಾಲಿಕೆ -೪೯ ಗಡಿಭಾಗದ ಅಪ್ಪಟ ದೇಸಿ ರಂಗ ಪ್ರತಿಭೆ ' ಹಚ್ಚೊಳ್ಳಿ ದ್ಯಾವಣ್ಣ'

Image
  ಬಣ್ಣದ ಬದುಕು ರಂಗ ಮಾಲಿಕೆ - ೪೯ ಗಡಿಭಾಗದ ಅಪ್ಪಟ ದೇಸಿ ರಂಗ ಪ್ರತಿಭೆ 'ಹಚ್ಚೊಳ್ಳಿಯ ದ್ಯಾವಣ್ಣ'      ' ಓದು ಒಕ್ಕಾಲು ಬುದ್ಧಿ ಮುಕ್ಕಾಲು ' ಎಂಬ ನಾಣ್ನುಡಿಗೆ ಅನೇಕ ನಿದರ್ಶನಗಳು ರಂಗಭೂಮಿಯಲ್ಲಿ ಕಾಣಬಹುದು.ಅಲ್ಲದೇ ಓದು ಬರಹ ಬರದಿದ್ದರೂ ಕಬ್ಬಿಣದ ಕಡಲೆಯಂತಿರುವ ಹಳಗನ್ನಡ ಸಂಭಾಷಣೆಗಳನ್ನು ಕಲಿಯುವಂತಹ ಚಾಕಚಕ್ಯತೆ ನಮ್ಮ ನಾಡಿನ ಮಣ್ಣಿನಲ್ಲಿ ಅವೃತವಾಗಿದೆ. ನಾ ಕಂಡಂತೆ ಹಚ್ಚೊಳ್ಳಿಯ ದ್ಯಾವಣ್ಣರ ಬಣ್ಣದ ಬದುಕನ್ನು  ನೈಜ ಉದಾಹರಣೆಯಾಗಿ ನೀಡಬಹುದಾಗಿದೆ.     ಇವರು ಕ್ರಿ.ಶ.೧೯೪೭ ರಲ್ಲಿ ರಂಗಪ್ಪ ಮತ್ತು ಯಂಕಮ್ಮ ದಂಪತಿಗಳ ಮಗನಾಗಿ ಸಿರುಗುಪ್ಪ ತಾಲ್ಲೂಕಿನ ಮಾಟೂರು ಗ್ರಾಮದಲ್ಲಿ ಜನಿಸಿದರು.ಇವರು ಮೂಲತಃ ಬಡ ಕುಟುಂಬದಲ್ಲಿ ಜನಿಸಿದ್ದರಿಂದ ಹಾಗೂ ಮನೆಗೆ ಹಿರಿಮಗನಾಗಿದ್ದರಿಂದ ವಿದ್ಯೆ ನೈವೇದ್ಯವಾಯಿತು. ಅಲ್ಲದೇ ಅಪ್ಪ ಹಾಕಿದ ಆಲದಮರಕ್ಕೆ ಮಗನೇ ಆಹಾರವಾದಂತೆ, ಇವರ ತಂದೆ ಉಳ್ಳವರ ಕುರಿಗಳನ್ನು ಕಾಯುತ್ತಾ ಕೂಲಿಗಾರನಾಗಿದ್ದರು. ಅಂತೆಯೇ ಇವರು ಸಹ ತಮ್ಮ ತಂದೆಯ ನಂತರ ೧೩ನೇ ವಯಸ್ಸಿಗೆ ಅದೇ ಮನೆಯ ಕುರಿಗಾಹಿಯಾದರು. ಅಲ್ಲದೆ ಕುರಿ ಕಾಯುತ್ತಾ ಸಹಚರರ ಮೂಲಕ ಹಚ್ಚೊಳ್ಳಿಗೆ ಜೀವನ ನಿರ್ವಹಣೆಗಾಗಿ ಬಂದರು. ಇವರ ಕುಟುಂಬದಲ್ಲಿ ಯಾರಲ್ಲೂ ಕಲೆಯ ಚಹರೆಗಳಿಲ್ಲದಿದ್ದರೂ ಅಪರೂಪಕ್ಕೆ ಇವರಲ್ಲಿ ರಂಗಕಲೆಯ ಅಂಶಗಳು ಗೋಚರಿಸಲಾರಂಭಿಸಿದವು.    ಕೂರಿ ಕಾಯಲೆಂದು ಹೋದಾಗ ಓರಗೆಯವರೆಲ್ಲರೂ ಸೇರಿ ನಾಟಕ ಮಾಡ...

ರಂಗ ಮಾಲಿಕೆ -೪೮ ರಂಗಭೂಮಿಯ ಸಂಭಾಷಣಾ ಚತುರ ' ಗೆಣಕಿಹಾಳ್ ಎಂ.ತಿಮ್ಮನಗೌಡ'

Image
  ಬಣ್ಣದ ಬದುಕು ರಂಗ ಮಾಲಿಕೆ - ೪೮ ರಂಗಭೂಮಿಯ ಸಂಭಾಷಣಾ ಚತುರ ' ಗೆಣಕಿಹಾಳ್ ಎಂ.ತಿಮ್ಮನಗೌಡ      ಅಪ್ಪಟ ಗ್ರಾಮೀಣ ಸೊಗಡಿನ ಗಂಧ ಗಾಳಿ ಸವಿಯುವ ಮೂಲಕ ಗ್ರಾಮೀಣ ರಂಗಭೂಮಿಗೆ ಕಾಲಿಟ್ಟು ,ಹವ್ಯಾಸಿ ರಂಗಭೂಮಿಯಲ್ಲಿ ಮಿನುಗುತಾರೆಯಾಗಿ ಅರಸದೆಯೇ ಶ್ರೇಷ್ಠಾತಿ ಶ್ರೇಷ್ಠ ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮಡಲಿಗೆ ಅರ್ಪಿಸಿಕೊಂಡ ಕೆಲವೇ ಕೆಲವರಲ್ಲೊಬ್ಬರು ಬಳ್ಳಾರಿಯ ಗೆಣಿಕಿಹಾಳ್ ಗ್ರಾಮದ ' ಮೇಲ್ಸೀಮೆ ತಿಮ್ಮನಗೌಡರು'.     ಇವರು ದಿನಾಂಕ : ೦೧.೦೬.೧೯೫೮ ರಂದು ಬಳ್ಳಾರಿಯ ಗೆಣಕಿಹಾಳ್ ಗ್ರಾಮದ ಮೇಲ್ಸೀಮೆ ರುದ್ರಗೌಡ ಮತ್ತು ಚನ್ನಮ್ಮ ದಂಪತಿಗಳ ಮಗನಾಗಿ ಜನಿಸಿದರು.ಮೂಲತಃ ಕೃಷಿಕ ಕುಟುಂಬದಲ್ಲಿ ಜನಿಸಿದ್ದರಿಂದ  ಹಾಗೂ ತಾತ ಮೇಲ್ಸೇಮೆ ಪಂಪನಗೌಡ ,ತಂದೆಯೂ ಸಹ ಆ ಭಾಗದ ಪ್ರಖ್ಯಾತ ಬಯಲಾಟ ಕಲಾವಿದರಾಗಿದ್ದರಿಂದ ಕಲೆ ರಕ್ತಗತವಾಗಿ ಬಂದಿತು. ಕೌಟುಂಬಿಕವಾಗಿ ಸಿರಿವಂತರಾಗಿದ್ದರು ಎಂದೂ ಕಲೆಯನ್ನು ಅಲಕ್ಷ್ಯವಾಗಿ ಕಾಣಲಿಲ್ಲ. ಅಂತೆಯೇ  ತಮ್ಮ ತಾತ ಪ್ರತಿ ಸಾರಿ ಬಯಲಾಟದ ತಾಲೀಮು ಮತ್ತು ಪ್ರದರ್ಶನಕ್ಕೆ ಹೋದಾಗಲೆಲ್ಲಾ ಇವರನ್ನು ಕರೆದೊಯ್ಯುತ್ತಿದ್ದರು. ಆ ಮೂಲಕ ವಿದ್ಯಾಭ್ಯಾಸವನ್ನು ೧೦ನೇ ತರಗತಿಯವರೆಗೆ ಸ್ಥಗಿತಗೊಳಿಸಿ ಒಂದೆಡೆ ಮನೆ ಇನ್ನೊಂದೆಡೆ ರಂಗಮನೆಯ ಉಸ್ತುವಾರಿ ನೋಡಿಕೊಳ್ಳುತ್ತಲೇ ನಾಟಕದ ಗೀಳು ಕಾಳ್ಗಿಚ್ಚಿನಂತೆ ಇವರನ್ನು ಅವರಿಸಿಕೊಂಡರು. ಓದುವಾಗ "ಅಪ್ಪನ ಆಸೆಯಂತೆ ಓದಿ ಶ್ರೇಷ್ಠ...