ರಂಗ ಮಾಲಿಕೆ -೬೨ ಗಡಿನಾಡಿನ ರಂಗಧ್ವನಿ 'ಬ್ರಮ್ಮಯ್ಯಾಚಾರಿ ನದಿಚಾಗಿ'..
ಬಣ್ಣದ ಬದುಕು ರಂಗ ಮಾಲಿಕೆ -೬೨ ಗಡಿನಾಡಿನ ರಂಗಧ್ವನಿ 'ಬ್ರಮ್ಮಯ್ಯಾಚಾರಿ ನದಿಚಾಗಿ'. ಗಿಡದಲ್ಲಿ ಅರಳಿದ ಅನೇಕ ಹೂಗಳಲ್ಲಿ ಕೆಲವು ದೇವರ ಪಾದ,ಮುಡಿ ಸೇರಿ ಸಾರ್ಥಕತೆ ಪಡೆದರೆ, ಅನೇಕ ಹೂಗಳು ಕಸದ ಪಾಲಾಗಿ ತಿಪ್ಪೆ ಸೇರುತ್ತವೆ. ಆದರೆ ಅವುಗಳಲ್ಲೂ ಕೆಲವೇ ಕೆಲವು ಹೂಗಳು ನೋಡುಗರ ಕಣ್ಮನ ಸೆಳೆದು ರಸಿಕರ ಅಂತರಾಳ ಸೇರುತ್ತವೆ. ಮೂರನೇ ಸಾಲಿನಲ್ಲಿ ನಿಲ್ಲಬಲ್ಲ ರಂಗಪುಷ್ಪವೊಂದು ಕರ್ನಾಟಕಾಂಧ್ರದ ಗಡಿಭಾಗದಲ್ಲಿ ಅರಳಿ ಕರುನಾಡ ತುಂಬಾ ಬೀರುತ್ತದೆ. ಆ ಕಲಾಕುಸುಮವೇ 'ಬ್ರಮ್ಮಯ್ಯ ನದಿಚಾಗಿ'. ಇವರು ಕ್ರಿ.ಶ.೧೯೭೪ರಲ್ಲಿ ದೇವೇಂದ್ರಪ್ಪಾಚಾರಿ ಮತ್ತು ಚಾಮುಂಡೇಶ್ವರಿ ದಂಪತಿಗಳ ಮಗನಾಗಿ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲ್ಲೂಕಿನ ನದಿಚಾಗಿಯಲ್ಲಿ ಜನಿಸಿದರು. ಹುಟ್ಟಿದ್ದು ಕರ್ನಾಟಕಾಂಧ್ರದ ಗಡಿಭಾಗವಾದರೂ ೫ ನೇ ತರಗತಿಯವರೆಗೆ ಕನ್ನಡದಲ್ಲೇ ವಿದ್ಯಾಭ್ಯಾಸ ಮಾಡಿದರು. ಬಾಲ್ಯದಲ್ಲಿ ತುಂಬಾ ತುಂಟರಾಗಿದ್ದರು.ಓರಗೆಯವರನ್ನು ಅಲಾಯಿ ಕುಣಿಗೆ ನೂಕಿ , ಹೊಡೆದು ಬಡಿದು ಪ್ರತಿನಿತ್ಯ ಮನೆಗೆ ಜಗಳ ತರುತ್ತಿದ್ದರು.ಅಲ್ಲದೇ ಇವರ ಬೇಜವಾಬ್ದಾರಿತನ ಮತ್ತು ಅತಿರೇಕದ ತುಂಟತನಕ್ಕೆ ಬೇಸತ್ತ ದೇವೆಂದ್ರಪ್ಪರು ಇವರನ್ನು ತಮ್ಮದೇ ಕುಲವೃತ್ತಿ ಬಡಿಗೆತನದ ಜೊತೆಗೆ ಕಮ್ಮಾರಿಕೆಯ ಕಲಿಕೆಗೆ ಸಹಾಯಕರಾಗಿ ನೇಮಿಸಿಕೊಂಡರು. ಅಲ್ಲದೇ ಕೇವಲ ೧೮ ನೇ ವಯಸ್ಸಿಗೆ ಇವರನ್ನು ಸಾವಿತ್ರಿ ಎಂಬುವುದರೊಂದಿಗೆ ವಿವಾಹ ಮಾಡಿ ಇವರ ಬದುಕಿನ ಪೂರ್ಣ ಚೌಕಟ್...