Posts

Showing posts from April, 2022

ರಂಗ ಮಾಲಿಕೆ -೬೨ ಗಡಿನಾಡಿನ ರಂಗಧ್ವನಿ 'ಬ್ರಮ್ಮಯ್ಯಾಚಾರಿ ನದಿಚಾಗಿ'..

Image
 ಬಣ್ಣದ ಬದುಕು ರಂಗ ಮಾಲಿಕೆ -೬೨ ಗಡಿನಾಡಿನ ರಂಗಧ್ವನಿ 'ಬ್ರಮ್ಮಯ್ಯಾಚಾರಿ ನದಿಚಾಗಿ'.     ಗಿಡದಲ್ಲಿ ಅರಳಿದ ಅನೇಕ ಹೂಗಳಲ್ಲಿ ಕೆಲವು ದೇವರ ಪಾದ,ಮುಡಿ ಸೇರಿ ಸಾರ್ಥಕತೆ ಪಡೆದರೆ, ಅನೇಕ ಹೂಗಳು ಕಸದ ಪಾಲಾಗಿ ತಿಪ್ಪೆ ಸೇರುತ್ತವೆ. ಆದರೆ ಅವುಗಳಲ್ಲೂ ಕೆಲವೇ ಕೆಲವು ಹೂಗಳು ನೋಡುಗರ ಕಣ್ಮನ ಸೆಳೆದು ರಸಿಕರ ಅಂತರಾಳ ಸೇರುತ್ತವೆ.  ಮೂರನೇ ಸಾಲಿನಲ್ಲಿ ನಿಲ್ಲಬಲ್ಲ ರಂಗಪುಷ್ಪವೊಂದು ಕರ್ನಾಟಕಾಂಧ್ರದ ಗಡಿಭಾಗದಲ್ಲಿ ಅರಳಿ ಕರುನಾಡ ತುಂಬಾ ಬೀರುತ್ತದೆ. ಆ ಕಲಾಕುಸುಮವೇ 'ಬ್ರಮ್ಮಯ್ಯ ನದಿಚಾಗಿ'.    ಇವರು ಕ್ರಿ.ಶ.೧೯೭೪ರಲ್ಲಿ ದೇವೇಂದ್ರಪ್ಪಾಚಾರಿ ಮತ್ತು ಚಾಮುಂಡೇಶ್ವರಿ ದಂಪತಿಗಳ ಮಗನಾಗಿ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲ್ಲೂಕಿನ ನದಿಚಾಗಿಯಲ್ಲಿ ಜನಿಸಿದರು. ಹುಟ್ಟಿದ್ದು ಕರ್ನಾಟಕಾಂಧ್ರದ ಗಡಿಭಾಗವಾದರೂ ೫ ನೇ ತರಗತಿಯವರೆಗೆ ಕನ್ನಡದಲ್ಲೇ ವಿದ್ಯಾಭ್ಯಾಸ ಮಾಡಿದರು. ಬಾಲ್ಯದಲ್ಲಿ ತುಂಬಾ ತುಂಟರಾಗಿದ್ದರು.ಓರಗೆಯವರನ್ನು ಅಲಾಯಿ ಕುಣಿಗೆ ನೂಕಿ , ಹೊಡೆದು ಬಡಿದು ಪ್ರತಿನಿತ್ಯ ಮನೆಗೆ ಜಗಳ ತರುತ್ತಿದ್ದರು.ಅಲ್ಲದೇ ಇವರ ಬೇಜವಾಬ್ದಾರಿತನ ಮತ್ತು ಅತಿರೇಕದ ತುಂಟತನಕ್ಕೆ ಬೇಸತ್ತ ದೇವೆಂದ್ರಪ್ಪರು ಇವರನ್ನು ತಮ್ಮದೇ ಕುಲವೃತ್ತಿ ಬಡಿಗೆತನದ ಜೊತೆಗೆ ಕಮ್ಮಾರಿಕೆಯ ಕಲಿಕೆಗೆ ಸಹಾಯಕರಾಗಿ ನೇಮಿಸಿಕೊಂಡರು. ಅಲ್ಲದೇ ಕೇವಲ ೧೮ ನೇ ವಯಸ್ಸಿಗೆ ಇವರನ್ನು ಸಾವಿತ್ರಿ ಎಂಬುವುದರೊಂದಿಗೆ ವಿವಾಹ ಮಾಡಿ ಇವರ ಬದುಕಿನ ಪೂರ್ಣ ಚೌಕಟ್...

"ಕಾರಂತ ರಂಗಲೋಕ (ರಿ) ಕಲಾತ್ಮಕ ಮನಸ್ಸುಗಳ ತಾಣಕ್ಕೀಗ ದಶಕ ಸಂಭ್ರಮ"

Image
 "ಕಾರಂತ ರಂಗಲೋಕ (ರಿ) ಕಲಾತ್ಮಕ ಮನಸ್ಸುಗಳ ತಾಣಕ್ಕೀಗ ದಶಕ ಸಂಭ್ರಮ" ಬಳ್ಳಾರಿಯ ಸರಳಾದೇವಿ ಡಿಗ್ರಿ ಕಾಲೇಜಿನಲ್ಲಿ ಓದುತ್ತಿರುವಾಗ  ಒಟ್ಟು ೨೦-೨೫ ಕಲಾಸಕ್ತ ಮನಸ್ಸುಗಳು ಸೇರಿಕೊಂಡು ಮೊದಲ ಬಾರಿಗೆ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದುಕೊಟ್ಟೆವು ಎಂದು ನಮ್ಮನ್ನು ಕೀಳಾಗಿ ಕಂಡವರ ಮುಂದೆ ಕಾಲರ್ ಎತ್ಕೊಂಡು ಅಲೆದಾಡಿದೆವು. ಆದಾದ ನಂತರ  ಒಂದರ ಹಿಂದೆ ಮತ್ತೊಂದು ಎಂಬಂತೆ  ಹತ್ತಾರು ಬಹುಮಾನಗಳ ಸುರಿಮಳೆಯೇ ಸುರಿಯ ತೊಡಗಿತು.ಅದಕ್ಕೆಲ್ಲಾ ಕಾರಣ ನಮ್ಮಲ್ಲಿದ್ದ ಟೀಮ್ ಸ್ಪೀರಿಟ್. ಹೀಗೆ ಸತತ ೨೦೧೦ ರಿಂದ ೨೦೧೩ ರವರಗೆ ಕಾಲೇಜಿನಲ್ಲಿ ಸಾಂಸ್ಕೃತಿಕವಾಗಿ ನಮ್ಮ ಹೆಸರು ಅಚ್ಚ ಹಸಿರಾಗಿತ್ತು. ಈಗಿರುವಾಗ ಕಾಲೇಜಿನಿಂದ ನಾವೆಲ್ಲಾ ಬೀಳ್ಕೊಟ್ಟ ನಂತರ ನಮ್ಮಲ್ಲಿನ ಕಲೆಗೆ ಅನಾಥ ಭಾವ ಕಾಡ ತೊಡಗಿತು‌. ಅಲ್ಲಿಯವರೆಗೆ ನಮ್ಮಲ್ಲಿನ ಕಲೆಗೆ ಕಾಲೇಜು ತಾಯಿಯಾಗಿತ್ತೆಂಬುದು ಕಾಲಕ್ರಮೇಣ ಅರಿವಾಗತೊಡಗಿತು. ಅಂತೆಯೇ ರಂಗ ಗುರು ಅಣ್ಣಾಜಿ ಕೃಷ್ಣಾರೆಡ್ಡಿಯವರ ಮಾರ್ಗದರ್ಶನದಲ್ಲಿ  ಕೊನೆಗೂ ಒಂದು ತಂಡ ಕಟ್ಟುವ ನಿರ್ಧಾರ ಮಾಡಿ ಒಟ್ಟು ಹತ್ತು  ಕಲಾತ್ಮಕ ಮನಸ್ಸುಗಳನ್ನು ಸೇರಿಸಿ  ರಂಗ ದಿಗ್ಗಜ ಬಿ.ವಿ.ಕಾರಂತ, ಜಾನಪದ ಗಾರುಡಿಗ ಶಿವರಾಮ ಕಾರಂತ ಹಾಗೂ ನನ್ನ ರಂಗಕಲೆಗೆ ಜೀವ ತುಂಬಿದ ಸಿನಿಮಾ ನಟ,ನಿರ್ದೇಶಕ ರಾಜೇಂದ್ರ ಕಾರಂತರ ಹೆಸರಲ್ಲಿ  "ಕಾರಂತ ರಂಗಲೋಕ - ಕಲಾತ್ಮಕ ಮನಸ್ಸುಗ...

ರಂಗ ಮಾಲಿಕೆ - ೬೦ ಗಡಿನಾಡಿನ ರಂಗ ಚೇತನ " ಕೊತ್ತಲಚಿಂತ ವಿ. ರಾಮಲಿಂಗಪ್ಪ ".

Image
  ಬಣ್ಣದ ಬದುಕು ರಂಗ ಮಾಲಿಕೆ - ೬೦ ಗಡಿನಾಡಿನ ರಂಗ ಚೇತನ " ಕೊತ್ತಲಚಿಂತ ವಿ. ರಾಮಲಿಂಗಪ್ಪ ". ಇವರು ೦೧-೦೬-೧೯೭೧ ರಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಗಡಿನಾಡಾದ ಹಚ್ಚೊಳ್ಳಿ ಗ್ರಾಮದ ವಿ.ರಾಮಪ್ಪ ಮತ್ತು ಸಣ್ಣಮ್ಮ ಎಂಬ ದಂಪತಿಗಳ ಮಗನಾಗಿ ಜನಿಸಿದರು. ತಮ್ಮ ಶಿಕ್ಷಣವನ್ನು ಹಚ್ಚೊಳ್ಳಿ ಮತ್ತು ಸಿರುಗುಪ್ಪದಲ್ಲಿ ಪೂರ್ಣಗೊಳಿಸಿದರು. ಮನೆಯಲ್ಲಿ ತುಂಬಾ ಬಡತನ ಇದ್ದುದರಿಂದ ಕೂಲಿ ನಾಲಿ ಮಾಡಿ ಸಾಕಿ ಬೆಳೆಸಿದ ತಂದೆ ತಾಯಿಗೆ ಆಸರೆಯಾಗುವ ದೃಷ್ಟಿಯಿಂದ ಓದುವ ಕಾಲದಲ್ಲೇ ಕ್ಯಾಲೆಂಡರ್ ಮಾರುತ್ತಿದ್ದರು. ಬಿ.ಕಾಂ ಓದಿದ್ದರಿಂದ ಕೆಲ ವರ್ಷಗಳ ಕಾಲ ಬ್ಯಾಂಕಿಂಗ್ ಪರೀಕ್ಷೆಗೆ ತಯಾರಿ ನಡೆಸಿ ವಿಫಲರಾದರು. ಆಗ ಹೊಳೆದದ್ದೇ ಅರೆ ವೈದ್ಯ ವೃತ್ತಿ ಮಾಡುವ ಯೋಚನೆ. ಹಾಗಾಗಿ ಹಚ್ಚೊಳ್ಳಿಯಲ್ಲಿ ವಾಸವಾಗಿದ್ದ ಕರ್ನೂಲ್ ಡಾ.ಶ್ರೀನಿವಾಸರ ಬಳಿ ಸಹಾಯಕರಾಗಿ ಸೇರಿ ಸುಮಾರು ವರ್ಷಗಳ ಕಾಲ ತರಬೇತಿ ಪಡೆದರು. ನಂತರ ತಮ್ಮ ತಾಯಿ ತವರಾದ ಕೊತ್ತಲಚಿಂತ ಕ್ಕೆ ಬಂದು ೧೯೯೫ರಲ್ಲಿ  ವಿ.ಸುಧಾ ಎಂಬುವರನ್ನು ವಿವಾಹವಾಗಿ ಅಲ್ಲಿಯೇ ಉಳಿದು ೧೯೯೮ ರಲ್ಲಿ  ಅರೆ ವೈದ್ಯರಾಗಿ (ಆರ್.ಎಂ.ಪಿ) ಸೇವೆ ಸಲ್ಲಿಸಲು ಮುಂದಾದರು.      ಈಗಾಗಲೇ ಹಚ್ಚೊಳ್ಳಿ ಮತ್ತು ಸಿರುಗುಪ್ಪದಲ್ಲಿ ನಡೆಯುತ್ತಿದ್ದ ರಂಗ ಚಟುವಟಿಕೆಗಳ ಪ್ರೇರಣೆಯಿಂದ ಕಾಲೇಜು ದಿನಗಳಲ್ಲಿ ಇವರಲ್ಲಿ ಚಿಗರೊಡೆದಿದ್ದ ನಾಟಕ ಮತ್ತು ಸಾಹಿತ್ಯದ ಸಸಿಗೆ ಆಸರೆಯಾಗಿ ಕೊತ್ತಲಚಿಂತ ವಿರೂಪ...