ಯೋಗ ಹುಟ್ಟಿದ ದೇಶದಲ್ಲೇ ಯೋಗಕ್ಕೆ ಮಾನ್ಯತೆಯಿಲ್ಲ - ಕುಲಪತಿ ಪ್ರೊ.ವೇಣುಗೋಪಾಲ್                                                                                                                                                                                                                                                              ಯೋಗ ಕೇವಲ ಇಂದು ವಯೋವೃದ್ಧರಿಗೆ ಸೀಮಿತ ಎನ್ನುವಂತಾಗಿದೆ ಆದರೆ ಮುಪ್ಪಿನ ವಯಸ್ಸಿನಲ್ಲಿ ಅದನ್ನು ಒಲೈಸಿಕೊಳ್ಳಲು ಪರದಾಡುವ ಬದಲು ಅದನ್ನು ನಮ್ಮ ಬಾಲ್ಯದ ಜೊತೆಯಲ್ಲೇ ರೂಡಿಸಿಕೊಂಡರೆ ನಾವೆಲ್ಲ ನಿರೋಗಿಗಳಾಗುತ್ತೇವೆ ಎಂದು ಅಭಿಪ್ರಾಯ ಪಟ್ಟರು.ವಿ.ವಿ ಯ ಯೋಗ ಕೇಂದ್ರದ ಸಹಯೋಗದಲ್ಲಿ ಜ್ಞಾನ ಭಾರತಿ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನವನ್ನು ಉದ್ದೇಶಿಸಿ ಮಾತಾನಾಡುತ್ತಾ ಒಂದನ್ನೊಂದು ಕಾಲದಲ್ಲಿ ಹಾವು ಹಿಡಿಯುವವರ ದೇಶವಾಗಿದ್ದ ಭಾರತ ಇಂದು ಯೋಗ ದೇಶವೆಂದು ಕರೆಯಲಾಗಿದೆ ಅದರ ಮಾನ್ಯತೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ನಮ್ಮೆಲ್ಲರ ಮೇಲಿದೆ ಅಲ್ಲದೆ ಶಾಲಾ ಹಂತದಿಂದಲೇ ಯೋಗ ಶಿಕ್ಷಣ ನೀಡುವಂತಾದರೆ ಬಹುಬೇಗ ನಿರೋಗಿ ದೇಶ ನಿರ್ಮಾಣ ಮಾಡಬಹುದು ಎಂದರು.ತದನಂತರ ವಿತ್ತಾಧಿಕಾರಿ ಪ್ರೊ.ಎ.ಲೋಕೇಶ್ ಮಾತಾನಾಡಿ ವಿಶ್ವದಾದ್ಯಂತ ಎಲ್ಲೆಡೆ ಪಾಶ್ಚಾತ್ಯ ಸಂಸ್ಕೃತಿ ಆವರಿಸಿ ಮನುಷ್ಯರನ್ನು ಅಧೋಗತಿಗೆ ಇಳಿಸಿದೆ.ಅದಕ್ಕಾಗಿಯೇ ಮನುಜನ ಏಳ್ಗೆಗೆ ಮತ್ತು ಅವನ ಬದುಕಿನ ಅನೇಕ ಜಂಜಾಟಗಳ ವಿಮುಕ್ತಿಗೆ ಯೋಗವೊಂದೇ ಪರಿಹಾರ. ಅಂತೆಯೇ ಅದರ ಮಹತ್ವ ಅರಿತು ಪ್ರಧಾನಿಯವರು ವಿಶ್ವಸಂಸ್ಥೆಯಲ್ಲಿ ವಿಶ್ವ ಮಾನ್ಯತೆಯ ಮುನ್ನುಡಿಯಾಡಲು ಇಡೀ ವಿಶ್ವವೇ ಒಕ್ಕೊರಲಿನಿಂದ ಮನ್ನಿಸಿ ಮರು ವರ್ಷವೇ ಇಡೀ ವಿಶ್ವವೇ ಅನ್ವಯಿಸಿಕೊಂಡರು ಎಂದು ನುಡಿದರು.ನಂತರ ಮಾತಾನಾಡಿದ ಕುಲಸಚಿವ ಪ್ರೊ.ಬಿ.ಕೆ.ರವಿ ಯೋಗ ಇದ್ದವರಿಗೆ ಯೋಗ ಒಲಿಯುತ್ತದೆ ಅಲ್ಲದೆ ಅದರ ವ್ಯಾಪ್ತಿ ಇಡೀ ಮನುಜ ಕುಲವನ್ನು ಆವರಿಸುವಂತಹದ್ದು ಆದರೆ ಪ್ರಕ್ಷುಬ್ಧ ವಾತಾವರಣದಿಂದಾಗಿ ಅದನ್ನೂ ಸಹ ಕೆಲವೇ ಧರ್ಮಗಳಿಗೆ ಸೀಮಿತಗೊಳಿಸುವ ಉನ್ಮಾದ ನಡೆಯುತ್ತಿದೆ ಇದನ್ನು ಕುಡಿಮೂಲದಿಂದಲೇ ಕೀಳಬೇಕು ಎಂದರು.ಕಾರ್ಯಕ್ರಮದಲ್ಲಿ ಪ್ರದರ್ಶನ ಕಲಾ ವಿಭಾಗ ಮತ್ತು ಯೋಗ ಕೇಂದ್ರದ ಮುಖ್ಯಸ್ಥ ಪ್ರೊ.ಕೆ.ರಾಮಕೃಷ್ಣಯ್ಯ,ಪ್ರಾಧ್ಯಾಪಕ ಗಂಗಾಧರ್,ಸಿದ್ದಪ್ಪ,ರಮೇಶ್, ವಿಭಾಗದ ವಿದ್ಯಾರ್ಥಿಗಳು ಮತ್ತಿತರರು ಭಾಗವಹಿಸಿದ್ದರು.

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.