ಬಯಲು ಸೀಮೆಯ ಗಂಡುಕಲೆ ಬಯಲಾಟ (ದೊಡ್ಡಾಟ) - ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ.
ಸಿರುಗುಪ್ಪ.ಮಾ.೩೧. ಬಯಲು ಸೀಮೆಯ ಕಲಾ ವೈಭವಕ್ಕೆ ಮೆರಗಿನ ನಿದರ್ಶನವೆಂದರೆ ಗಂಡುಕಲೆಯಾದ ಬಯಲಾಟ (ದೊಡ್ಡಾಟ) ಎಂದು ಕಾರ್ಯದರ್ಶಿ ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಬೈರಗಾಮದಿನ್ನೆಯಲ್ಲಿ ಕಾರಂತ ರಂಗಲೋಕ, ಬಿ.ಜಿ.ದಿನ್ನೆ (ರಿ) ಮತ್ತು ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸಂಸ್ಥೆಯ ೪ನೇ ವಾರ್ಷೀಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ಪಾಂಡು ವಿಜಯ ಬಯಲಾಟ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ, ಬಯಲಾಟವು ಬಳ್ಳಾರಿಯ ಸೋಮಸಮುದ್ರ ಶಾಸನ ಪ್ರಕಾರ ಬಯಲಾಟ  ಬಯಲುಸೀಮೆಯಲ್ಲಿ ಹುಟ್ಟಿ  ಇಡೀ ನಾಡಿಗೆಲ್ಲಾ ಪಸರಿದೆ.ಆದರೆ ಪ್ರತ್ಯೇಕ ಅಕಾಡೆಮಿ ಹೊಂದಿದ್ದರು.ಇಂತಹ ಗಂಡುಕಲೆ ಇಂದು ಸೂಕ್ತ ಪಾಲನೆ ಪೋಷಣೆಯಿಲ್ಲದೆ ಶೋಚನೀಯ ಸ್ಥಿತಿಗೆ ತಲುಪಿರುವುದು ವಿಷಾದನೀಯ ಎಂದರು.ಕಾರ್ಯಕ್ರದಲ್ಲಿ ಗ್ರಾ.ಪಂ ಸದಸ್ಯರಾದ ಪಿ.ಲಿಂಗನಗೌಡ,ಕೆ.ದ್ಯಾವಪ್ಪ,ರಂಗಕರ್ಮಿ ಆರ್.ಪ್ರಕಾಶಗೌಡ,ಕೆ.ಗಿರಿಯಪ್ಪ,ಆರ್.ಭೀಮನಗೌಡ, ಹೆಚ್.ಕೆ.ನರಸಗೌಡ,ಪಿ.ಅಯ್ಯನಗೌಡ,ಪಿ.ಪಂಪನಗೌಡ,ಈರಣ್ಣ ಮತ್ತಿತರಿದ್ದರು.
ನಾಟಕದಲ್ಲಿ ಬಾಲಕೃಷ್ಣನಾಗಿ ರಾಮಕೃಷ್ಣ, ದುರ್ಯೋಧನಾಗಿ ಆರ್.ಮಲ್ಲನಗೌಡ.ದುಶ್ಯಾಸನನಾಗಿ ವೀರೇಶ,ಕೀಚನನಾಗಿ ಕೆ.ಮಲ್ಲಿಕಾರ್ಜುನ, ಧರ್ಮರಾಯನಾಗಿ ಉಮೇಶ,ಉಗ್ರಸೇನನಾಗಿ ವೀರೇಂದ್ರ,ಚಿತ್ರಸೇನನಾಗಿ ವೀರೇಶ,ಕರ್ಣನಾಗಿ ಗರ್ಜೆಪ್ಪ,ವಿರಾಟರಾಜನಾಗಿ ಬಿ.ವೀರೇಶ,ಅರ್ಜುನನಾಗಿ ಬಸವ ಮುಂತಾದವರು ಮನೋಜ್ಞವಾಗಿ ಅಭಿನಯಿಸಿ ಜನ ಮನ್ನಣೆ ಗಳಿಸಿದರು.

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.